ಕರ್ನಾಟಕ

karnataka

ETV Bharat / state

ದೇವೇಗೌಡರ ಜೊತೆ ಸಚಿವ ಆರ್ ಅಶೋಕ್ ಮಾತುಕತೆ.. ಕುತೂಹಲ ಮೂಡಿಸಿದ ಭೇಟಿ

ದೇವೇಗೌಡರನ್ನು ಭೇಟಿಯಾದ ಸಚಿವ ಆರ್ ಅಶೋಕ್. ಮಾಜಿ ಪ್ರಧಾನಿಗಳ ಆರೋಗ್ಯ ವಿಚಾರಿಸಿದ ಆರ್ ಅಶೋಕ್. ಕುತೂಹಲ ಮೂಡಿಸಿದ ಭೇಟಿ.

By

Published : Sep 17, 2022, 3:21 PM IST

Updated : Sep 17, 2022, 5:14 PM IST

ದೇವೇಗೌಡರ ಜೊತೆ ಸಚಿವ ಆರ್ ಅಶೋಕ್ ಮಾತುಕತೆ
ದೇವೇಗೌಡರ ಜೊತೆ ಸಚಿವ ಆರ್ ಅಶೋಕ್ ಮಾತುಕತೆ

ಬೆಂಗಳೂರು:ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರು ಇಂದು ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರು. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿದ ಅಶೋಕ್ ಅವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ದೇವೇಗೌಡರು ಬರಮಾಡಿಕೊಂಡರು.

ನಂತರ ದೇವೇಗೌಡರ ಆರೋಗ್ಯ ವಿಚಾರಿಸಿದ ಸಚಿವ ಅಶೋಕ್, ಕೆಲ ಕಾಲ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.

ದೇವೇಗೌಡರನ್ನು ಭೇಟಿಯಾದ ಸಚಿವ ಆರ್ ಅಶೋಕ್

ಕುತೂಹಲ ಮೂಡಿಸಿದ ಅಶೋಕ್ ಭೇಟಿ:ಇಂದು ಗೌಡರ ನಿವಾಸಕ್ಕೆ ಸಚಿವ ಅಶೋಕ್ ದಿಢೀರ್ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳು ಭಾರಿ ಮಹತ್ವ ಪಡೆದುಕೊಂಡಿದ್ದು, ದೇವೇಗೌಡರ ಭೇಟಿಗೆ ಈ ಕಾರಣವೂ ಇರಬಹುದೆಂದು ಹೇಳಲಾಗುತ್ತಿದೆ. ಅದು ಏನೇ ಇದ್ದರೂ ಅಶೋಕ್-ದೇವೇಗೌಡರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

(ಇದನ್ನೂ ಓದಿ: ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಬೇಕು, ನನಗೆ ನಂಬರ್ ಬೇಕು, ನಮ್ಮ ಸರ್ಕಾರ ಬರಬೇಕು: ಡಿಕೆಶಿ)

Last Updated : Sep 17, 2022, 5:14 PM IST

ABOUT THE AUTHOR

...view details