ಕರ್ನಾಟಕ

karnataka

ETV Bharat / state

'ಗೋಹತ್ಯೆ ನಿಷೇಧ ವಿಧೇಯಕ ಮಂಡಿಸುವ ಅವಕಾಶ ಸಿಕ್ಕಿದ್ದು ಸಂತಸದ ವಿಚಾರ' - Bengaluru News

'ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ'ವನ್ನು ವಿಧಾನಸಭೆಯಲ್ಲಿ ಮಂಡಿಸಿದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಂತಸ ವ್ಯಕ್ತಪಡಿಸಿದ್ದಾರೆ.

ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್
ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

By

Published : Dec 10, 2020, 1:01 PM IST

ಬೆಂಗಳೂರು: 'ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಖುಷಿಯಾಗುತ್ತಿದೆ. ಸಿಎಂ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳು ಮತ್ತು ಪಕ್ಷದ ಶಾಸಕರ ಸಹಕಾರದಿಂದ ಇದು ಸಾಧ್ಯವಾಯಿತು' ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ಅಂಗೀಕಾರ ದೊರೆತ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, '2010ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಲ್ ಮಂಡಿಸಿದ್ದರು. ಆದರೆ ನಂತರ ಬಂದ ಸರ್ಕಾರ ಅದನ್ನು ಹಾಗೆಯೇ ಉಳಿಸಿತ್ತು. ಈಗ ಗೋವುಗಳ ಸಂರಕ್ಷಣೆ ಆಗಬೇಕು ಎಂದು ಉತ್ತರಪ್ರದೇಶ ಮತ್ತು ಗುಜರಾತ್​ಗೆ ಹೋಗಿ ಅಧ್ಯಯನ ಮಾಡಿ ಕಾಯ್ದೆ ರಚಿಸಿದ್ದೇವೆ' ಎಂದರು.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

ಓದಿ:ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಬಿಜೆಪಿ ಕಚೇರಿಗಳಲ್ಲಿ ಗೋಪೂಜೆ ಮೂಲಕ ಸ್ವಾಗತ

ಸಂವಿಧಾನ ಬದ್ಧವಾಗಿ ಬಿಲ್ ಪಾಸ್ ಮಾಡಲಾಗಿದೆ. ನಿಯಮಾನುಸಾರ ವಿಧೇಯಕದ ಪ್ರತಿಯನ್ನು ಪ್ರತಿಪಕ್ಷಗಳಿಗೂ ಕೊಟ್ಟಿದ್ದೇವೆ. ಆದರೆ ಅವರು ಚರ್ಚೆ ಮಾಡದೆ ಧರಣಿ ಮಾಡಿದರು ಎಂದು ಪ್ರತಿಪಕ್ಷ ಸದಸ್ಯರ ವಿರೋಧದ ಧರಣಿ ನಡುವೆ ಬಿಲ್ ಪಾಸ್ ಆಗಿದ್ದನ್ನು ಸಮರ್ಥಿಸಿಕೊಂಡರು.

ಕಾಯ್ದೆ ಕಾನೂನಾಗಿ ಜಾರಿಯಾದ ನಂತರ ನಿರುಪಯುಕ್ತ ರಾಸುಗಳ ಪೋಷಣೆ ಕಷ್ಟವಾದಲ್ಲಿ ಅಂತಹವರ ನೆರವಿಗೆ ಸರ್ಕಾರ ಬರಲಿದೆ. ಎಲ್ಲಾ ಕಡೆ ಗೋಶಾಲೆ ನಿರ್ಮಾಣ ಮಾಡುತ್ತೇವೆ. ಧರ್ಮಶಾಲೆ ನಿರ್ಮಾಣ ಮಾಡುತ್ತೇವೆ. ಅದಕ್ಕೆ ಅನುಪಯುಕ್ತ ರಾಸುಗಳನ್ನು ಕಳಿಸಿಕೊಡಿ. ಗೋ ಮಾತೆ ರಕ್ಷಣೆ ಮಾಡಲಾಗುತ್ತದೆ. ಈ ಕಾನೂನು ಕರ್ನಾಟಕದ ಇತಿಹಾಸದಲ್ಲಿ ಒಂದು ಸುಂದರ ಕಾನೂನು ಆಗಲಿದೆ ಎಂದರು.

ABOUT THE AUTHOR

...view details