ಕರ್ನಾಟಕ

karnataka

By

Published : Dec 17, 2020, 1:45 PM IST

ETV Bharat / state

ಬೆಂಗಳೂರು : ಟ್ರಾಫಿಕ್ ಕ್ಲಿಯರ್ ಮಾಡಿದ ಬೈರತಿ ಬಸವರಾಜ್​... ಸಚಿವರ ನಡೆಗೆ ಜನರಿಂದ ಮೆಚ್ಚುಗೆ

ಹೊರಮಾವು ಸಮೀಪ ಅಭಿವೃದ್ಧಿ ಕಾಮಗಾರಿಯೊಂದಕ್ಕೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸ್ವತಃ ರಸ್ತೆಗಿಳಿದು ಸಂಚಾರ ದಟ್ಟಣೆಯನ್ನು ಸರಿಪಡಿಸಿದ್ದಾರೆ. ಸಚಿವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Minister Birathi Basavaraj Cleared Traffic at Horamavu signal
ಟ್ರಾಫಿಕ್ ಕ್ಲೀಯರ್ ಮಾಡಿದ ಸಚಿವ ಬೈರತಿ ಬಸವರಾಜ್​

ಕೆ. ಆರ್​. ಪುರ(ಬೆಂಗಳೂರು):ಹೊರಮಾವು ಸಿಗ್ನಲ್ ಬಳಿನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸ್ವತಃ ರಸ್ತೆಗಿಳಿದು ಸಂಚಾರ ದಟ್ಟಣೆಯನ್ನು ನಿಭಾಯಿಸಿದ್ದಾರೆ.

ಟ್ರಾಫಿಕ್ ಕ್ಲಿಯರ್ ಮಾಡಿದ ಸಚಿವ ಬೈರತಿ ಬಸವರಾಜ್​

ಹೊರಮಾವು ಸಮೀಪ ಅಭಿವೃದ್ಧಿ ಕಾಮಗಾರಿಯೊಂದಕ್ಕೆ ಶಂಕುಸ್ಥಾಪನೆ ನೆರವೇರಿಸಲು ಸಚಿವರು ಆಗಮಿಸಿದ್ದರು. ಈ ವೇಳೆ 1 ಕಿ. ಮೀ. ಗೂ ಹೆಚ್ಚು ದೂರ ಸಂಚಾರ ದಟ್ಟಣೆ ಉಂಟಾಗಿರುವುದು ಸಚಿವರ ಗಮನಕ್ಕೆ ಬಂತು. ಕೂಡಲೇ ರಸ್ತೆಗಿಳಿದ ಸಚಿವರು, ಟ್ರಾಫಿಕ್ ಸಮಸ್ಯೆ ಬಗೆಹರಿಸಿ ವಾಹನಗಳ ಸರಾಗ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಚಿವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details