ಕರ್ನಾಟಕ

karnataka

ETV Bharat / state

ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ತಡೆಗೆ ವಿಪಕ್ಷಗಳು ಚಿಂತಿಸಿದ್ದವು: ಆರ್. ಅಶೋಕ್ - ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮಂಡನೆ

ಗೋಹತ್ಯೆ ನಿಷೇಧ ವಿಧೇಯಕವನ್ನು ಸದನ ಸಮಿತಿಗೆ ವಹಿಸುವಂತೆ ಮಾಡಲು ವಿಪಕ್ಷಗಳು ಯೋಚಿಸಿದ್ದವು. ನಾವು ಕೂಡ ಅವರಿಗಿಂತ ಚಾಣಾಕ್ಷರಿದ್ಧೇವೆ. ಮಸೂದೆಯಿಂದ ಏನಾಗುತ್ತದೆ ಎಂಬುದನ್ನು ತಿಳಿಯಲು ಮುಂದಿನ ಅಧಿವೇಶನದವರೆಗೂ ಕಾದು ನೋಡಿ ಎಂದು ಸಚಿವ ಆರ್​. ಅಶೋಕ್ ಹೇಳಿದ್ದಾರೆ.

Minister Ashok reaction about Anti Cow Sluaghter Bill
ಸಚಿವ ಆರ್. ಅಶೋಕ್

By

Published : Dec 10, 2020, 11:35 PM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಗೋಹತ್ಯೆ ನಿಷೇಧ ವಿಧೇಯಕಕ್ಕೆ ಅಂಗೀಕಾರ ಸಿಗದಂತೆ ಮಾಡಲು ವಿಪಕ್ಷಗಳು ಯೋಚಿಸಿದ್ದವು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ವಿಧೇಯಕವನ್ನು ಸದನ ಸಮಿತಿಗೆ ವಹಿಸುವಂತೆ ಮಾಡಲು ವಿಪಕ್ಷಗಳು ಯೋಚಿಸಿದ್ದವು. ನಾವು ಕೂಡ ಅವರಿಗಿಂತ ಚಾಣಾಕ್ಷರಿದ್ಧೇವೆ. ಮಸೂದೆಯಿಂದ ಏನಾಗುತ್ತದೆ ಎಂಬುದನ್ನು ತಿಳಿಯಲು ಮುಂದಿನ ಅಧಿವೇಶನದವರೆಗೂ ಕಾದು ನೋಡಿ. ಈ ವಿಧೇಯಕ ಹೊಸದೇನಲ್ಲ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲೂ ಜಾರಿಗೆ ತರಲಾಗಿದೆ. ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.

ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್. ಅಶೋಕ್

ಇದನ್ನೂ ಓದಿ : ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಿಸಿದ ಸಿದ್ದಗಂಗಾ ಮಠದ ಸ್ವಾಮೀಜಿ

ಬೆಂಗಳೂರಿಗೆ ಹೊಸ ವಿಧೇಯಕವನ್ನು ಎರಡೂ ಸದನಗಳಲ್ಲಿ ಮಂಡಿಸಲಾಗಿದೆ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಅದರಿಂದ ಅನುಕೂಲವಾಗುತ್ತದೆ ಎಂದರು.

ABOUT THE AUTHOR

...view details