ಕರ್ನಾಟಕ

karnataka

By

Published : Aug 6, 2019, 8:12 AM IST

ETV Bharat / state

ಕಾಮಗಾರಿಗಳನ್ನು ವೇಗವಾಗಿ ಮುಗಿಸಿ: ಅಧಿಕಾರಿಗಳಿಗೆ ಮೇಯರ್​​​​ ಗಂಗಾಂಬಿಕೆ ಸೂಚನೆ

ಕೆ.ಆರ್ ಪುರಂನ ಹೊರಮಾವು ವಾರ್ಡ್‌ನಲ್ಲಿರುವ ಪಾಲಿಕೆ ಕಚೇರಿಗೆ ದಿಢೀರ್​​​ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್​​,​ ಕಾಮಗಾರಿಗಳನ್ನು ವೇಗವಾಗಿ ಮುಗಿಸುವಂತೆ ಸೂಚಿಸಿದ್ದಾರೆ.

ಪಾಲಿಕೆ ಕಚೇರಿಗೆ ಮೇಯರ್​​ ದಿಢೀರ್​​​ ಭೇಟಿ

ಬೆಂಗಳೂರು: ರಸ್ತೆ, ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಸೂಚಿಸಿದ್ದಾರೆ. ಕೆ.ಆರ್ ಪುರಂನ ಹೊರಮಾವು ವಾರ್ಡ್‌ನಲ್ಲಿರುವ ಪಾಲಿಕೆ ಕಚೇರಿಗೆ ದಿಢೀರ್​​​ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದೊಂದು ವಾರದ ಹಿಂದೆ ಹೊರಮಾವು ವಾರ್ಡ್​ನಲ್ಲಿ ಬರುವ ಜಯಂತಿನಗರ, ಕಲ್ಕೆರೆ ರಸ್ತೆ, ಹೊರಮಾವು ಮುಖ್ಯರಸ್ತೆಗಳು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು. ಇದೇ ವಿಷಯವಾಗಿ ಹೊರಮಾವು ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು.

ಅಧಿಕಾರಿಗಳ ಮಧ್ಯೆ ಕೋ ಆರ್ಡಿನೇಷನ್ ಇಲ್ಲದೇ ಇದ್ದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ಸರಿಪಡಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ವೇಗವಾಗಿ ಬಗೆಹರಿಸಬೇಕಿದೆ. ಹೊರಮಾವು ಭಾಗದ ಕೆಲವು ಹಳ್ಳಿಗಳು 110 ಹಳ್ಳಿಗೆ ಸೇರಿರುವುದರಿಂದ ಕಾಮಗಾರಿ ಹಂತ ಹಂತವಾಗಿ ಮಾಡಲಾಗುತ್ತದೆ ಎಂದರು.

ಪಾಲಿಕೆ ಕಚೇರಿಗೆ ಮೇಯರ್​​ ದಿಢೀರ್​​​ ಭೇಟಿ

ಸಾರ್ವಜನಿಕರು ಮನೆ ಮನೆಗೆ ನೀರಿನ ಸಂಪರ್ಕ, ಯುಜಿಡಿ ಸಂಪರ್ಕವನ್ನು ಆದಷ್ಟು ಬೇಗ ತೆಗೆದುಕೊಂಡರೆ ರಸ್ತೆಗಳಿಗೆ ಡಾಂಬರು ಹಾಕುವ ಕೆಲಸ ಮಾಡಬಹುದು. ಹೀಗಾಗಿ ಸಾರ್ವಜನಿಕರು ಸಹಕಾರ ಅಗತ್ಯ ಎಂದು ಮನವಿ ಮಾಡಿದ್ರು.

ABOUT THE AUTHOR

...view details