ಕರ್ನಾಟಕ

karnataka

By

Published : Sep 14, 2019, 8:51 AM IST

Updated : Sep 14, 2019, 5:26 PM IST

ETV Bharat / state

ಸಿಲಿಕಾನ್​ ಸಿಟಿಯಲ್ಲಿ 'ಮೇಯರ್ ಕಪ್' ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ಪುರುಷ ಮತ್ತು ಮಹಿಳೆಯರ "ಮೇಯರ್ ಕಪ್" ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ಸಿಕ್ಕಿದೆ.

ಬ್ಯಾಂಡ್ಮಿಂಟನ್ ಪಂದ್ಯಾವಳಿ

ಬೆಂಗಳೂರು:ಎಂ.ಎನ್.ಕೃಷ್ಣರಾವ್ ಪಾರ್ಕ್ ಉದ್ಯಾನದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 13, 14 ಹಾಗೂ 15 ರವರೆಗೆ ಮೂರು ದಿನಗಳ ಕಾಲ ಖಾಸಗಿ ಸಂಸ್ಥೆ ಸಹಭಾಗಿತ್ವದೊಂದಿಗೆ ಪುರುಷ ಮತ್ತು ಮಹಿಳೆಯರ "ಮೇಯರ್ ಕಪ್" ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಬಿಬಿಎಂಪಿ ಮೇಯರ್ ಶುಕ್ರವಾರ ಉದ್ಘಾಟಿಸಿದ್ದಾರೆ.

ಮೇಯರ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್​ಗೆ ಚಾಲನೆ

ಮೇಯರ್ ಕಪ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಬ್ಯಾಡ್ಮಿಂಟನ್ ಆಟಗಾರರ ಜೊತೆಗೆ ಗ್ರಾಮೀಣ ಪ್ರತಿಭೆಗಳಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇದನ್ನು ಆಯೋಜನೆ ಮಾಡಲಾಗಿದೆ. ಒಟ್ಟು 8 ಫ್ರಾಂಚೈಸಿಗಳನ್ನ ಒಳಗೊಂಡ ಟೂರ್ನಾಮೆಂಟ್ ಇದಾಗಿದೆ. ದೇಶ-ವಿದೇಶಗಳಿಂದ ಒಟ್ಟು 104 ಪ್ರತಿಭಾನ್ವಿತ ವೃತ್ತಿಪರರು ಟೂರ್ನಿಯಲ್ಲಿ ಭಾಗವಹಿಸಿದ್ದು, ಇಂದು ಮತ್ತು ನಾಳೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ.

ಪ್ರಾಂಚೈಸಿಗಳ ಪಟ್ಟಿ:

  • ಜಿ-ಟರ್ನ್ಸ್ ಅಟ್ಯಾಕರ್ಸ್
  • ಕ್ರಿಯೇಟೀವ್ ಸ್ಪೋರ್ಟ್ಸ್ ಅಕಾಡೆಮಿ
  • ಭವಾನಿ ಸೂಪರ್ ಸ್ಮಾಷರ್ಸ್
  • ಲಾ-ಮಾರ್ವೆಲ್ಲಾ ಟೈಟಾನ್ಸ್
  • ಪಿಬಿಎ ಪ್ಯಾಂಥರ್ಸ್
  • ಬೆಂಗಳೂರು ವಾರಿಯರ್ಸ್
  • ವಿ4ಯು
  • ಅರ್ಬನೈಜರ್ ಅಲ್ಟಿಮೇಟ್ಸ್
Last Updated : Sep 14, 2019, 5:26 PM IST

ABOUT THE AUTHOR

...view details