ಕರ್ನಾಟಕ

karnataka

ETV Bharat / state

ಮಾಸ್ಕ್​​ ಡೇ: ಜನಜಾಗೃತಿ ನಡಿಗೆಯಲ್ಲಿ ಗಮನಸೆಳೆದ ಪೊಲೀಸ್​ ಮಾಸ್ಕ್ - people awerness programme about mask

ಪೊಲೀಸ್ ಸಿಬ್ಬಂದಿ ನಿತ್ಯ ನೂರಾರು ಜನರ ಜೊತೆ ಸಂಪರ್ಕದಲ್ಲಿರುತ್ತಾರೆ. ಪ್ರತಿಯೊಬ್ಬರೂ ಮಾಸ್ಕ್​ ಸರಿಯಾಗಿ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ಬೇರೆಯವರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

Mask Day:  police mask focused in rally at bengalore
ಜನಜಾಗೃತಿ ನಡಿಗೆಯಲ್ಲಿ ಗಮನಸೆಳೆದ ಪೊಲೀಸ್​ ಮಾಸ್ಕ್​

By

Published : Jun 18, 2020, 12:14 PM IST

Updated : Jun 18, 2020, 1:04 PM IST

ಬೆಂಗಳೂರು:ರಾಜ್ಯ ಸರ್ಕಾರದಿಂದ ನಡೆದಮಾಸ್ಕ್​​ ಡೇ ಜನಜಾಗೃತಿ ನಡಿಗೆಯಲ್ಲಿ ಪೊಲೀಸ್ ಇಲಾಖೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿತ್ತು. ಅಲ್ಲದೇ ವಿಧಾನಸೌಧದಿಂದ ಹಡ್ಸನ್ ವೃತ್ತದವರೆಗೆ ಪಥ ಸಂಚಲನ ನಡೆದಿದ್ದು, ಈ ವೇಳೆ ಸಮವಸ್ತ್ರದ ಜೊತೆಗೆ, ಇಲಾಖೆಯ ಲೋಗೋ ಇರುವ ಮಾಸ್ಕ್ ಅನ್ನು ಸಿಎಂ ಸೇರಿದಂತೆ ಇಲಾಖೆಯ ಪ್ರತಿಯೊಬ್ಬರು ಧರಿಸಿದ್ದರು.

ಜನಜಾಗೃತಿ ನಡಿಗೆಯಲ್ಲಿ ಗಮನಸೆಳೆದ ಪೊಲೀಸ್​ ಮಾಸ್ಕ್

ಈ ವೇಳೆ, ಈಟಿವಿ ಭಾರತ್ ಜೊತೆ ಮಾತನಾಡಿದ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜೂನ್ 18, ರಾಜ್ಯ ಸರ್ಕಾರದ ವತಿಯಿಂದ ಮಾಸ್ಕ್ ಡೇ ಆಚರಿಸಲಾಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆಯೂ ಉತ್ಸಾಹದಿಂದ ಮಾಸ್ಕ್ ಡೇಯಲ್ಲಿ ಪಾಲ್ಗೊಂಡಿದೆ ಎಂದರು.

ನಂತರ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ನಿತ್ಯ ನೂರಾರು ಜನರ ಜೊತೆ ಸಂಪರ್ಕದಲ್ಲಿರುತ್ತಾರೆ. ಪ್ರತಿಯೊಬ್ಬರೂ ಮಾಸ್ಕ್​ ಸರಿಯಾಗಿ ಧರಿಸಬೇಕು. ಒಂದು ವೇಳೆ ಧರಿಸದಿದ್ರೆ ಬೇರೆಯವರ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಇದನ್ನು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

ಇದೀಗ ಮಾಸ್ಕ್ ಯೂನಿಫಾರಂ ಕೂಡಾ ಬಂದು ಬಿಟ್ಟಿದೆ. ಸ್ಯಾನಿಟೈಸರ್ , ಹ್ಯಾಂಡ್ ವಾಶ್, ಗ್ಲೌಸ್, ಫೇಸ್ ಮಾಸ್ಕ್​ನ್ನು ಇಲಾಖೆಗೆ ಕಡ್ಡಾಯ ಮಾಡಲಾಗಿದೆ. ನಾವು ಸುರಕ್ಷಿತವಾಗಿದ್ದರೆ, ಜನರನ್ನು ಸುರಕ್ಷಿತವಾಗಿ ನೋಡಿಕೊಳ್ಳಬಹುದಾಗಿದೆ ಎಂದರು.

Last Updated : Jun 18, 2020, 1:04 PM IST

ABOUT THE AUTHOR

...view details