ಕರ್ನಾಟಕ

karnataka

ETV Bharat / state

ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಪ್ರಕರಣ: ಸಾವಿರಾರು ಕೋಟಿ ಹಣಕ್ಕೆ ಈತನೇ ‘ಯುವರಾಜ’! - allegedly defrauding BJP leaders

ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ಯುವರಾಜ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಬಳಿ ಸಾವಿರ ಕೋಟಿಗೆ ಬೆಲೆ ಬಾಳುವ ಆಸ್ತಿ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ ಎನ್ನಲಾಗ್ತಿದೆ.

Man Arrested for allegedly defrauding BJP leaders
ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಪ್ರಕರಣ

By

Published : Dec 21, 2020, 11:13 AM IST

ಬೆಂಗಳೂರು: ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ವಿಚಾರಣೆಯನ್ನ ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಆರೋಪಿ ಯುವರಾಜ ಅಲಿಯಾಸ್ ಸ್ವಾಮಿ ಕೋಟಿಗಟ್ಟಲೇ ಆಸ್ತಿಯ ಒಡೆಯ ಎಂಬ ರೋಚಕ ವಿಷಯ ಬಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಕುಲಕರ್ಣಿ ನ್ಯಾಯಾಂಗ ಬಂಧನ ಅವಧಿ ಅಂತ್ಯ : ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ​ ಹಾಜರು

ಯುವರಾಜ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಬಳಿ ಸಾವಿರ ಕೋಟಿಗೆ ಬೆಲೆ ಬಾಳುವ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಅಷ್ಟು ಮಾತ್ರವಲ್ಲದೇ ಸಕಲೇಶಪುರದಲ್ಲಿ 35 ಎಕರೆ ಟೀ ಎಸ್ಟೇಟ್ ಹೊಂದಿದ್ದು, ಎಸ್ಟೇಟ್​ನಲ್ಲಿ 61 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಎಲ್ಲಾ ಚೆಕ್​ಗಳ ಮೇಲೆ 25 ಲಕ್ಷದಿಂದ ಹಿಡಿದು, 25 ಕೋಟಿ ರೂಪಾಯಿವರೆಗೂ ಬರೆದಿದ್ದಾನೆ ಎನ್ನಲಾಗ್ತಿದೆ. ಯುವರಾಜ ಈ ಚೆಕ್​ಗಳಲ್ಲಿ ಯಾರ ಹೆಸರನ್ನು ಬರೆದಿರದ ಕಾರಣ ಚೆಕ್ ಎಲ್ಲಿಂದ, ಯಾರಿಗೆ ತಲುಪುತ್ತಿತ್ತು ಎಂಬುದು ತನಿಖೆ ಬಳಿಕವೇ ತಿಳಿಯಬೇಕಿದೆ.

ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ ಯುವರಾಜನ ಮೋಸದ ಜಾಲ: ಹೆಚ್ಚಿನ ವಿಚಾರಣೆಗೆ 5 ದಿನಗಳ ಕಾಲ ವಶಕ್ಕೆ ಪಡೆದ ಸಿಸಿಬಿ

ಯುವರಾಜನ ಆಸ್ತಿಯ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದ್ದು, ಹಿರಿಯ ಬಿಜೆಪಿ ಮುಖಂಡರ ಹೆಸರಲ್ಲಿ ಈತ ಹಲವರಿಗೆ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದ ಎಂದು ಆರೋಪಿಸಿ ಸಿಸಿಬಿಗೆ ದೂರು ಬಂದಿತ್ತು. ಈ ಸಂಬಂಧ ಯುವರಾಜನ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details