ಕರ್ನಾಟಕ

karnataka

By

Published : Mar 6, 2020, 12:36 PM IST

ETV Bharat / state

ಮಧ್ಯಪ್ರದೇಶದಲ್ಲಿ ಆಪರೇಷನ್​ ಕಮಲ: ಈ ಹೋಟೆಲ್​​ನಲ್ಲಿದ್ದಾರಂತೆ 4 ಕೈ ಶಾಸಕರು !

ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ, ನಾಲ್ವರು ಕೈ ಶಾಸಕರನ್ನು ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಹಿಡಿದಿಟ್ಟಿದ್ದಾರೆ ಎನ್ನಲಾಗ್ತಿದೆ.

4 Congress lawmakers in Bangalore
ಬೆಂಗಳೂರಿನಲ್ಲಿರುವ 4 ಕೈ ಶಾಸಕರು

ಬೆಂಗಳೂರು: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ವಿಚಾರ, ಇನ್ನೂ ಬೆಂಗಳೂರಿನಲ್ಲೇ ನಾಲ್ವರು ಕೈ ಶಾಸಕರು ಇದ್ದಾರೆ ಎಂಬ ಮಾಹಿತಿ ದೊರೆತಿದೆ.

ಬೆಂಗಳೂರಿನಲ್ಲಿರುವ 4 ಕೈ ಶಾಸಕರು

ಸುರೇಂದ್ರ ಸಿಂಗ್ ಶೇರ್, ರಘುರಾಜ್ ಕನ್ಸಾನಾ, ಹರದೀಪ್ ಸಿಂಗ್ ಡುಂಗಾ, ಬಿಸಾಹುಲ್ ಲಾಲ್ ಸಿಂಗ್ ನಿನ್ನೆ ರಾತ್ರಿ ತವರಿಗೆ ಮರಳುವುದಾಗಿ ಹೇಳಿದ್ದರು. ಆದ್ರೆ ಇನ್ನೂ ಬೆಂಗಳೂರಿನಲ್ಲೇ ಉಳಿದಿದ್ದಾರೆ ಎನ್ನಲಾಗಿದೆ.

ನಿನ್ನೆ ಯುಬಿ ಸಿಟಿಯಲ್ಲಿ ಸ್ಟೇಯಾಗಿದ್ದ ಶಾಸಕರನ್ನ, ಮತ್ತೆ ಬಿಜೆಪಿ ನಾಯಕರು ಹಿಡಿದಿಟ್ಟಿದ್ದಾರೆ. ಮಹದೇವಪುರದ ಓಕ್ ವುಡ್ ರೆಸಾರ್ಟ್​ನಲ್ಲಿ ಕೇಂದ್ರ ಬಿಜೆಪಿ ನಾಯಕರ ಅಣತಿಯಂತೆ ಬಿಜೆಪಿ ನಾಯಕರು ಅವರನ್ನು ಹಿಡಿದಿಟ್ಟಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details