ಕರ್ನಾಟಕ

karnataka

ETV Bharat / state

ಗವಿಗಂಗಾಧರೇಶ್ವರ ದೇವಸ್ಥಾನ ಮತ್ತು ಕೆಂಪಾಂಬುದಿ ಕೆರೆ ಉನ್ನತೀಕರಣಕ್ಕೆ ಸ್ಥಳೀಯರ ಆಗ್ರಹ - undefined

ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಅಧಿಕಾರಿಗಳು ಪುರಾತನ ದೇವಾಲಯವಾದ ಗವಿಗಂಗಾಧರೇಶ್ವರ ದೇವಸ್ಥಾನ ಮತ್ತು ಕೆಂಪಾಬುದಿ ಕೆರೆ ಅಭಿವೃದ್ಧಿ ಕಾಮಗಾರಿಯ ತಪಾಸಣೆಯನ್ನು ನಡೆಸಿದರು.

ಮೇಯರ್ ಗಂಗಾಂಬಿಕೆ

By

Published : Jun 20, 2019, 5:12 AM IST

ಬೆಂಗಳೂರು: ನಗರದ ಪುರಾತನ ದೇವಾಲಯವಾದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕಾಮಗಾರಿ ಯೋಜನೆಯನ್ನು ಐದು ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ನಂತರ, ಕೆಂಪಾಬುದಿ ಕೆರೆ ಅಭಿವೃದ್ಧಿ ಕಾಮಗಾರಿಯ ತಪಾಸಣೆಯನ್ನು ನಡೆಸಿದರು. ಈ ವೇಳೆ ಹತ್ತು ಕೋಟಿ ಖರ್ಚು ಮಾಡಿದರೂ, ಕೆರೆಯ ಸುತ್ತ ದುರ್ವಾಸನೆ ತಪ್ಪಿಲ್ಲ, ಕೆರೆ ನೀರೊಳಗೆ ಕೊಳಚೆ ನೀರು ಸೇರ್ಪಡೆಯಾಗ್ತಿದೆ ಎಂದು ದೂರಿದರು. ತಕ್ಷಣವೇ ಮಲಿನ ನೀರು ಕೆರೆಗೆ ಹರಿಯದಂತೆ ಸರಿಪಡಿಸುವಂತೆ ಮೇಯರ್ ಅಧಿಕಾರಿಗಳಿಗೆ ಆದೇಶಿಸಿದರು.

ಅಲ್ಲದೆ 40 ಲಕ್ಷ ರೂ. ಕಾಮಗಾರಿ ಬಾಕಿ ಇದ್ದು, ಸಂಗೀತ ಕಾರಂಜಿ, ಬೋಟಿಂಗ್, ವಾಯುವಿಹಾರಕ್ಕೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ, ಬೆಂಚ್​ಗಳ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.

For All Latest Updates

TAGGED:

ABOUT THE AUTHOR

...view details