ಕರ್ನಾಟಕ

karnataka

By

Published : May 28, 2019, 6:29 PM IST

ETV Bharat / state

ವಿದ್ಯುತ್ ತಂತಿ ತಗುಲಿ ಲೈನ್​ಮ್ಯಾನ್​ ಸ್ಥಳದಲ್ಲೇ ಸಾವು

ವಿದ್ಯುತ್​ ತಂತಿ ತಗುಲಿ ಲೈನ್​​ಮ್ಯಾನ್​ ಮೃತಪಟ್ಟ ಘಟನೆ ಆರ್ ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಈ ನಡುವೆ ಲೈನ್​​ಮ್ಯಾನ್​ ಮೃತಪಟ್ಟರೂ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ವಿದ್ಯುತ್ ತಂತಿ ತಗುಲಿ ಲೈನ್​ಮ್ಯಾನ್​ ಸ್ಥಳದಲ್ಲೇ ಸಾವು

ಬೆಂಗಳೂರು: ವಿದ್ಯುತ್​ ತಗುಲಿ ಲೈನ್​​ಮ್ಯಾನ್ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಆರ್ ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ.

ಅಶೋಕ್ ಮೃತ ದುರ್ದೈವಿ. ಇತ್ತೀಚೆಗೆ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್​ ತಂತಿ ತುಂಡರಿಸಿ ಬಿದ್ದಿದೆ. ಇದರ ಬಗ್ಗೆ ಆರ್ ಟಿ ನಗರ ಬೆಸ್ಕಾಂ ಕಚೇರಿಗೆ ದೂರು ಬಂದಿತ್ತು. ದೂರಿನ ಅನ್ವಯ ವಿದ್ಯುತ್ ತಂತಿ ಸರಿಪಡಿಸುವ ವೇಳೆ ವಿದ್ಯುತ್ ತಾಗಿ ಲೈನ್​​ಮ್ಯಾನ್ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಲೈನ್​ಮ್ಯಾನ್ ಅಜಾಗರೂಕತೆಯೇ ಈ ಅವಘಡಕ್ಕೆ ಕಾರಣವೆಂದು ಬೆಸ್ಕಾಂ ಅಧಿಕಾರಿಗಳು ಹೇಳುತಿದ್ದಾರೆ. ಇನ್ನು ಅಶೋಕ್ ಮೃತಪಟ್ಟ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇನ್ನು ಮೃತದೇಹವನ್ನ ಜೈನ್​ ಆಸ್ಪತ್ರೆಗೆ ರವಾನಿಸಲಾಗಿದೆ.

ABOUT THE AUTHOR

...view details