ಕರ್ನಾಟಕ

karnataka

ETV Bharat / state

ಚೆಕ್​​ಪೋಸ್ಟ್​​ಗಳು ಡಿಜಿಟಲ್ ಆಗಲಿ, ಅಧಿಕಾರಿಗಳ ದೌರ್ಜನ್ಯ ನಿಲ್ಲಲಿ: ವಾಹನ ಮಾಲೀಕರ ಮನವಿ

ರಾಜಸ್ಥಾನ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಚೆಕ್​​ಪೋಸ್ಟ್ ಡಿಜಿಟಲೈಸ್ ಆಗಿದೆ. ಆ ರಾಜ್ಯದ ಗಡಿಭಾಗಕ್ಕೆ ಹೋಗುತ್ತಿದ್ದಂತೆ ಅಲ್ಲೇ ಹಣ ಕಟ್ಟಿದರೆ, ಎಸ್​ಎಂ‌ಎಸ್ ಮೂಲಕ ಮಾಹಿತಿ ಬರಲಿದೆ. ಇದೇ ವ್ಯವಸ್ಥೆ ರಾಜ್ಯದಲ್ಲೂ ಅನುಷ್ಟಾನಗೊಂಡರೆ ಸಹಾಯವಾಗಲಿದೆ ಎಂಬುದು ಚಾಲಕರ ಮನವಿ.

By

Published : Jun 26, 2019, 8:32 AM IST

ಚೆಕ್​​ಪೋಸ್ಟ್​​ಗಳು ಡಿಜಿಟಲ್ ಆಗಲಿ

ಬೆಂಗಳೂರು:ಚೆಕ್​ಪೋಸ್ಟ್​​ಗಳಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಬೇಕು. ಆ ಮೂಲಕ ಆರ್​ಟಿಒ ಅಧಿಕಾರಿಗಳಿಂದ ಆಗುವ ದೌರ್ಜನ್ಯ ಹಾಗೂ ಲೂಟಿ ನಿಲ್ಲುಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಈಗಾಗಲೇ ಈ ಸಂಬಂಧ ಅಧಿಕಾರಿಗಳ ದೌರ್ಜನ್ಯಕ್ಕೆ ಬೇಸತ್ತು ಪಕ್ಕದ ಕೇರಳ ರಾಜ್ಯದಲ್ಲಿ ನಿನ್ನೆ ಸಂಪೂರ್ಣವಾಗಿ ಖಾಸಗಿ ಬಸ್​ಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ಈಗ ಇದೇ ವಿಚಾರ ರಾಜ್ಯದಲ್ಲೂ ಕೇಳಿ ಬಂದಿದ್ದು, ನಮಗೆ ಚೆಕ್​​ಪೋಸ್ಟ್​​ಗಳಲ್ಲಿ ಡಿಜಿಟಲ್ ವ್ಯವಸ್ಥೆ ರೂಪಿಸಿಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಪ್ರವಾಸಿ ವಾಹನ ಮಾಲೀಕರು ಮನವಿ ಮಾಡಿದ್ದಾರೆ.

ಚೇಂಬರ್ಸ್ ಆಫ್ ಕಾಮರ್ಸ್ ಮುಖಾಂತರ ಸಿಎಂ‌ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದು, ವಾರದೊಳಗೆ ಟ್ಯಾಕ್ಸಿ ಯುನಿಯನ್​​ನೊಂದಿಗೆ ಸಭೆ ಕರೆಯಲಾಗಿದೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮಾಹಿತಿ ನೀಡಿದ್ದಾರೆ.

ರಾಜಸ್ಥಾನ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಚೆಕ್​​ಪೋಸ್ಟ್ ಡಿಜಿಟಲೈಸ್ ಆಗಿದೆ. ಆ ರಾಜ್ಯದ ಗಡಿಭಾಗಕ್ಕೆ ಹೋಗುತ್ತಿದ್ದಂತೆ ಅಲ್ಲೇ ಹಣ ಕಟ್ಟಿದರೆ, ಎಸ್​ಎಂ‌ಎಸ್ ಮೂಲಕ ಮಾಹಿತಿ ಬರಲಿದೆ. ಇದೇ ವ್ಯವಸ್ಥೆ ರಾಜ್ಯದಲ್ಲೂ ಬಂದರೆ ಸಹಾಯವಾಗಲಿದೆ ಎಂಬುದು ಚಾಲಕರ ಮನವಿ.

ಆರ್​ಟಿಒ ಅಧಿಕಾರಿಗಳಿಂದ ಆಗುವ ದೌರ್ಜನ್ಯ ಹಾಗೂ ಅಕ್ರಮ ವಾಹನಗಳ ಪ್ರವೇಶ ತಡೆಗಟ್ಟಲು ಡಿಜಿಟಲ್ ವ್ಯವಸ್ಥೆ ತರುವಂತೆ ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲೂ ಕೂಗು ಕೇಳಿ ಬರುತ್ತಿದೆ.

ABOUT THE AUTHOR

...view details