ಬೆಂಗಳೂರು: ಭಾರತೀಯ ಮಜ್ದೂರ್ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ & ವೈ. ಶಿ. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನಿಯೋಗವು ಇಂದು ಆರೋಗ್ಯ ಸಚಿವ ಶ್ರೀರಾಮುಲುರನ್ನ ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಂಡರು.
ಹಲವು ಜಿಲ್ಲೆಗಳಲ್ಲಿ 3-4ತಿಂಗಳಿಂದ ವೇತನ ಆಗದೇ ಇರುವ ಬಗ್ಗೆ ಹಾಗೂ RNTCP ಯ ನೌಕರರಿಗೆ GPS ಅಳವಡಿಕೆಯನ್ನು ರದ್ದುಪಡಿಸುವಂತೆ ಸೇರಿ ಹಲವು ಬೇಡಿಕೆಯ ಬಗ್ಗೆ ಚರ್ಚೆ ನಡೆಸಿದರು. ಈ ವರೆಗೂ ಆದ ಬೆಳವಣಿಗೆ ಬಗ್ಗೆ ಮತ್ತು ಮುಷ್ಕರದ ಬಗ್ಗೆ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳ ಬಗ್ಗೆ ಸಹ ಚರ್ಚೆ ಮಾಡಿಲಾಯಿತು.