ಮಹಾದೇವಪುರ :ರಾಜ್ಯಾದ್ಯಂತ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿರೋ ಮತದಾನದ ವೇಳೆ ಮಹದೇವಪುರದ ಬಿದರಹಳ್ಳಿಯ ಕಾಡಾಗ್ರಹಾರದಲ್ಲಿ ಲಾಠಿಚಾರ್ಜ್ ನಡೆದಿದೆ.
ಮಹದೇವಪುರ : ಗ್ರಾಮ ಪಂಚಾಯತ್ ಚುನಾವಣೆ ವೇಳೆ ಲಾಠಿಚಾರ್ಜ್ - ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ

10:35 December 27
ಮಹದೇವಪುರದ ಬಿದರಹಳ್ಳಿಯ ಕಾಡಾಗ್ರಹಾರದಲ್ಲಿ ಗ್ರಾಪಂ ಚುನಾವಣೆಗೆ ನಡೆದ ಮತದಾನ ವೇಳೆ ಲಾಠಿ ಪ್ರಹಾರ ನಡೆದಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಾಗ್ರಹಾರ ಗ್ರಾಮದಲ್ಲಿ ಗ್ರಾಪಂ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದೆ. ನೀಲಸಂದ್ರದಿಂದ ಬಂದು ಮತದಾನ ಮಾಡುತ್ತಿದ್ದಾರೆ ಎಂಬ ಆರೋಪದ ವಿಚಾರವಾಗಿ ಎರಡು ಗುಂಪುಗಳ ನಡುವಿನ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಇದನ್ನೂ ಓದಿ: ಚುನಾವಣಾ ಫಲಿತಾಂಶ ಬರುವ ಮುನ್ನವೇ ಗ್ರಾ.ಪಂ ಅಭ್ಯರ್ಥಿ ಸಾವು