ಕರ್ನಾಟಕ

karnataka

ಲಕ್ಷ್ಮಣ ಕೊಲೆ‌ ಕೇಸ್: ಕೋತಿ ರಾಮ ಸೇರಿದಂತೆ ಮಂಡ್ಯ ಭಾಗದ ರೌಡಿಗಳ ವಿಚಾರಣೆ

By

Published : Mar 16, 2019, 1:33 PM IST

ರೌಡಿ ಲಕ್ಷ್ಮಣ ಕೊಲೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಂಡ್ಯ ಭಾಗದಲ್ಲಿರುವ ರೌಡಿಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕೇಸ್​ನಲ್ಲಿ ಕೋತಿರಾಮನ ಹೆಸರು ಕೇಳಿ ಬಂದ ಕಾರಣ, ಅವನ ವಿಚಾರಣೆ ನಡೆಸಿದ್ದಾರೆ.

ಕೊಲೆಯಾದ ಲಕ್ಷ್ಮಣ

ಬೆಂಗಳೂರು: ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮಂಡ್ಯ, ಮದ್ದೂರು ರಾಮನಗರ, ಚನ್ನಪಟ್ಟಣ ಸೇರಿದಂತೆ ಆ ಭಾಗದ ರೌಡಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಲಕ್ಷ್ಮಣ ಕೊಲೆ ಕೇಸ್​ನಲ್ಲಿ ಕೋತಿರಾಮನ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋತಿರಾಮನನ್ನು ಸಿಸಿಬಿಗೆ ಕರೆಸಿ ನಿನ್ನೆ ಸಂಜೆ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಮತ್ತೆ ಯಾರ್ಯಾರ ಕೈವಾಡವಿದೆಯೋ ಅವರೆನೆಲ್ಲಾ ಕರೆಸಿ ವಿಚಾರಣೆ ನಡೆಸಿದ್ದು, ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details