ಕರ್ನಾಟಕ

karnataka

ETV Bharat / state

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಿಂದ ವ್ಯಕ್ತಿವೋರ್ವ ಬಿದ್ದು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಭರತ್ ಮೃತ ಕಾರ್ಮಿಕ.

By

Published : Sep 7, 2019, 1:49 AM IST

ಸಾವನ್ನಪ್ಪಿರುವ ವ್ಯಕ್ತಿ

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಕಟ್ಟಡದಿಂದ ಕೆಳಗ್ಗೆ ಬಿದ್ದು ಸಾವ್ನನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಸಾವನ್ನಪ್ಪಿರುವ ವ್ಯಕ್ತಿ

ಉತ್ತರ ಭಾರತ ಮೂಲದ ಭರತ್ ಮೃತ ಕಾರ್ಮಿಕ. ಹಲವು ತಿಂಗಳಿಂದ ಕೊಡಿಗೆಹಳ್ಳಿಯ ಬಳಿಯ ಮುಂಬೈ ಮೂಲದ ಪಾರ್ತ್ ಕನ್ಸ್​​ಟ್ರಕ್ಷನ್ ಹಾಗೂ ಡೆವಲಪರ್ಸ್​ ವತಿಯಿಂದ ದೊಡ್ಡ ಮಟ್ಟದ ಅಪಾರ್ಟ್​ಮೆಂಟ್ ನಿರ್ಮಾಣವಾಗುತ್ತಿತ್ತು. ಈ ಕಟ್ಟಡದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ವೇಳೆ ಕಟ್ಟಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಭರತ್ ಎಂಬಾತ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ.

ಕೆಲಸ ಮಾಡುವ ಜಾಗದಲ್ಲಿ ಸೂಕ್ತ ರಕ್ಷಣೆ ಇರಲಿಲ್ಲ ಎಂದು ಆರೋಪಿಸಿ ಅಲ್ಲಿನ ಸಿಬ್ಬಂದಿ ಕೆಲಸ ಮಾಡದಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details