ಕರ್ನಾಟಕ

karnataka

ETV Bharat / state

ಸ್ಟೇರಿಂಗ್ ಕಟ್ಟಾಗಿ ನಿಯಂತ್ರಣ ತಪ್ಪಿದ  ಕೆಎಸ್​ಆರ್​ಟಿಸಿ ಬಸ್... ತಪ್ಪಿದ ಪ್ರಾಣಾಪಾಯ! - ksrtc bus accident in Doddaballapura

ತೂಬಗೆರೆ ದೊಡ್ಡಬಳ್ಳಾಪುರ  ಮಾರ್ಗವಾಗಿ ಹೊರಟ ಕೆಎಸ್​ಆರ್​ಟಿಸಿ ಬಸ್ ಮಾರ್ಗ ಮಧ್ಯದಲ್ಲಿನ ತಿರುಮಗೊಂಡನಹಳ್ಳಿಯ ಬಳಿ ಬರುವಾಗ ಸ್ಟೇರಿಂಗ್ ಕಟ್ಟಾಗಿ ಬಸ್​ ಹಳ್ಳಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.

KSRTC Bus accident in Doddaballapura.....people are safe!
ಸ್ಟೇರಿಂಗ್​ರಾಡ್ ಕಟ್ಟಾಗಿ ನಿಯಂತ್ರಣ ತಪ್ಪಿದ  ಕೆಎಸ್​ಆರ್​ಟಿಸಿ ಬಸ್...ತಪ್ಪಿದ ಪ್ರಾಣಾಪಾಯ!

By

Published : Feb 4, 2020, 8:42 AM IST

Updated : Feb 4, 2020, 8:54 AM IST

ದೊಡ್ಡಬಳ್ಳಾಪುರ:ಬೆಳ್ಳಂಬೆಳಗ್ಗೆ ದೊಡ್ಡಬಳ್ಳಾಪುರ ನಗರಕ್ಕೆ ಹೊರಟ ಕೆಎಸ್​ಆರ್​ಟಿಸಿ ಬಸ್​ನ ಸ್ಟೇರಿಂಗ್ ರಾಡ್ ಕಟ್ಟಾಗಿ ಬಸ್​ ಹಳ್ಳಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.

ಸ್ಟೇರಿಂಗ್ ​ರಾಡ್ ಕಟ್ಟಾಗಿ ನಿಯಂತ್ರಣ ತಪ್ಪಿದ ಕೆಎಸ್​ಆರ್​ಟಿಸಿ ಬಸ್...ತಪ್ಪಿದ ಪ್ರಾಣಾಪಾಯ!

ತೂಬಗೆರೆ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊರಟ ಕೆಎಸ್​ಆರ್​ಟಿಸಿ ಬಸ್ ಮಾರ್ಗ ಮಧ್ಯದಲ್ಲಿನ ತಿರುಮಗೊಂಡನಹಳ್ಳಿಯ ಬಳಿ ಬರುವಾಗ ಸ್ಟೇರಿಂಗ್ ಕಟ್ಟಾಗಿದೆ. ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ಕಟ್ಟಲಾಗಿದ್ದ ಹಸುವಿಗೆ ಗುದ್ದಿ ನಂತರ ಕೊಟ್ಟಿಗೆಯನ್ನು ನೆಲಸಮ ಮಾಡಿದ್ದಾನೆ.

ಆನಂತರ ಬಸ್​​ ರಸ್ತೆ ಬದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿನ ಹಳ್ಳಕ್ಕೆ ನುಗ್ಗಿದೆ. ಬಸ್​ನಲ್ಲಿ ಕಾಲೇಜ್ ಮತ್ತು ಶಾಲೆಗೆ ಹೊರಟ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅದೃಷ್ಟವಶಾತ್ ಯಾರಿಗೂ ಸಣ್ಣಪುಟ್ಟ ಗಾಯ ಸಹ ಆಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಹಸುವಿನ ಕಣ್ಣಿನ ಸುತ್ತ ಚಿಕ್ಕಪುಟ್ಟ ಗಾಯಗಳಾಗಿವೆ.

ಕೆಎಸ್​ಆರ್​ಟಿಸಿ ಡಿಪೋ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಡಕೋಟಾ ಬಸ್​ಗಳನ್ನು ಹಾಕುತ್ತಾರೆ. ಇದರಿಂದಾಗಿ ದಾರಿ ಮಧ್ಯೆ ಬಸ್ ಕೆಟ್ಟು ನಿಲ್ಲುವುದು, ಅಪಘಾತಗಳಂತಹ ಘಟನೆಗಳು ನಡೆಯೋದು ಸಾಮಾನ್ಯವಾಗಿದೆ ಎಂದು ಗ್ರಾಮಸ್ಥರು ಡಿಪೋ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

Last Updated : Feb 4, 2020, 8:54 AM IST

ABOUT THE AUTHOR

...view details