ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ನೌಕರರಿಗೆ ಸಿಹಿ ಸುದ್ದಿ...ಎರಡು ಮಕ್ಕಳಿದ್ದರೆ ದೊರೆಯುತ್ತೆ ವಿಶೇಷ ವೇತನ! - undefined

ನಾವಿಬ್ಬರು ನಮಗಿಬ್ಬರೂ ಎಂಬ ಸರ್ಕಾರದ ಫ್ಯಾಮಿಲಿ ಪ್ಲ್ಯಾನಿಂಗ್​ ಯೋಜನೆಗೆ ಕೆಎಸ್ಆರ್​ಟಿಸಿ ಕೈ ಜೋಟಿಸಿದ್ದು, ಸಾರಿಗೆ ಇಲಾಖೆಯಲ್ಲಿರುವ ಎರಡು ಮಕ್ಕಳನ್ನು ಹೊಂದಿರುವಂತಹ ನೌಕರರಿಗೆ ವಿಶೇಷ ವೇತನ ನೀಡಲು ಮುಂದಾಗಿದೆ

Bangalore

By

Published : Jun 29, 2019, 2:23 PM IST

Updated : Jun 29, 2019, 2:32 PM IST

ಬೆಂಗಳೂರು:ಸರ್ಕಾರದಫ್ಯಾಮಿಲಿ ಪ್ಲ್ಯಾನಿಂಗ್​ಗೆ ಕೆಎಸ್ಆರ್​ಟಿಸಿ ಹೊಸ ನಿಯಮವನ್ನು ಜಾರಿಗೆ ಮಾಡಿದ್ದು, ಎರಡು ಮಕ್ಕಳನ್ನು ಹೊಂದಿರುವ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಮುಂದಾಗಿದೆ.

ಎರಡು ಮಕ್ಕಳು ಸಾಕು ಎನ್ನುವ ಸರ್ಕಾರದ ಯೋಜನೆಗೆ ಸಾರಿಗೆ ನಿಗಮ ಕೈ ಜೋಡಿಸಿದ್ದು, ಕೆಎಸ್​ಆರ್​ಟಿಸಿ ನೌಕರರಲ್ಲಿ ಯಾರು ಎರಡು ಮಕ್ಕಳನ್ನು ಹೊಂದಿರುತ್ತಾರೋ ಅಂತಹವರಿಗೆ ವಿಶೇಷ ವೇತನ ನೀಡಲು ಮುಂದಾಗಿದೆ. ಈ ಸೌಲಭ್ಯವನ್ನು ಪಡೆಯಲು ನೌಕರರು ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿರುತ್ತದೆ.

ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ ಹೊರಡಿಸಿರುವ ಸುತ್ತೋಲೆ

ತರಬೇತಿ ನೌಕರರಿಗೂ ಈ ನಿಯಮ ಅನ್ವಯವಾಗಲಿದ್ದು, ವಾರ್ಷಿಕ ವೇತನ ಬಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಅವರ ಪೂರ್ಣ ಸೇವಾವಧಿಗೆ ಪಡೆಯಲು ಅರ್ಹರಿರುತ್ತಾರೆ. ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಆದೇಶಿಸಲಾಗಿದೆ.

ಒಂದು ವೇಳೆ ಅರ್ಜಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಧೃಡೀಕರಣ ಪತ್ರ ಇಲ್ಲವಾದಲ್ಲಿ ಈ ವಿಶೇಷ ವೇತನ ಬಡ್ತಿಗೆ ಅರ್ಹರಾಗುವುದಿಲ್ಲದೆಂದು ಆದೇಶಿಸಲಾಗಿದೆ. ಈ ಸಂಬಂಧ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ ಸುತ್ತೋಲೆ ಹೊರಡಿಸಿದ್ದಾರೆ.

Last Updated : Jun 29, 2019, 2:32 PM IST

For All Latest Updates

TAGGED:

ABOUT THE AUTHOR

...view details