ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪಿಗಳಾದ ಸಿ.ಎಂ.ಗೌತಮ್, ಅಬ್ರಾರ್ ಖಾಜಿ ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದ್ರೆ, ಬಳ್ಳಾರಿ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ರೆಡ್ಡಿಗೆ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರರವರು ನೀಡಿದ್ದಾರೆ.
ಕೆಪಿಎಲ್ ಹಗರಣ: ಬಳ್ಳಾರಿ ಟಸ್ಕರ್ಸ್ ತಂಡದ ಮೂವರಿಗೆ ಹೈ ಕೋರ್ಟ್ನಿಂದ ರಿಲೀಫ್ - KPL scandal
ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ರೆಡ್ಡಿ, ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದರು. ಇವರು ಕೆಪಿಎಲ್ ಹಗರಣ ಬೆಳಕಿಗೆ ಬರ್ತಾ ಇದ್ದ ಹಾಗೆ ತಲೆ ಮರೆಸಿಕೊಂಡಿದ್ದರು.
![ಕೆಪಿಎಲ್ ಹಗರಣ: ಬಳ್ಳಾರಿ ಟಸ್ಕರ್ಸ್ ತಂಡದ ಮೂವರಿಗೆ ಹೈ ಕೋರ್ಟ್ನಿಂದ ರಿಲೀಫ್ ಕೆಪಿಎಲ್ ಹಗರಣ, KPL scam](https://etvbharatimages.akamaized.net/etvbharat/prod-images/768-512-5345178-thumbnail-3x2-nin.jpg)
ಕೆಪಿಎಲ್ ಹಗರಣ
ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ರೆಡ್ಡಿ, ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದರು. ಇವರು ಕೆಪಿಎಲ್ ಹಗರಣ ಬೆಳಕಿಗೆ ಬರ್ತಾ ಇದ್ದ ಹಾಗೆ ತಲೆ ಮರೆಸಿಕೊಂಡಿದ್ದರು. ಇನ್ನು ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಖಾಜಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಈಮೂವರಿಗೆ ಹೈಕೋರ್ಟ್ನಿಂದ ರಿಲೀಫ್ ಸಿಕ್ಕಿದೆ.
ನ್ಯಾಯಲಯ ಆರೋಪಿಗಳಿಗೆ 2 ಲಕ್ಷದ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸದಂತೆ ಹಾಗೂ ತನಿಖೆಗೆ ಸಹಕಾರ ನೀಡಬೇಕೆಂದು ಸೂಚನೆಗಳನ್ನ ನೀಡಿದೆ.