ಕರ್ನಾಟಕ

karnataka

By

Published : May 17, 2019, 5:11 PM IST

ETV Bharat / state

ನಿಂಬೆಹಣ್ಣು ವ್ಯಾಪಾರಿಯ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ

ನಿಂಬೆಹಣ್ಣು ಮಾರಾಟ ಜಾಗಕ್ಕಾಗಿ ಕೆಲ ದಿನಗಳ ಹಿಂದೆ ಭರತ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿ ಭರತ್

ಬೆಂಗಳೂರು: ಕೆ.ಆರ್ ಮಾರ್ಕೆಟ್​ನಲ್ಲಿ ನಿಂಬೆ ಹಣ್ಣು ಮಾರಾಟ ಜಾಗಕ್ಕಾಗಿ ನಡೆದ ಭರತ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಕೆ.ಆರ್ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಶರವಣ, ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ವೇಲು ಎಂಬಾತ ತಲೆಮರೆಸಿಕೊಂಡಿದ್ದಾನೆ. ಕೆ.ಆರ್ ಮಾರ್ಕೆಟ್​ನಲ್ಲಿ ಭರತ್ ನಿಂಬೆ ಹಣ್ಣು ಮಾರಾಟ ಮಾಡ್ತಿದ್ದ. ಭರತ್ ಹಾಗೂ ಮಾರ್ಕೆಟ್​​ ವೇಲು ನಡುವೆ ನಿಂಬೆ ಹಣ್ಣು ಮಾರೋ ಜಾಗದ ವಿಷಯಕ್ಕೆ ಕೆಲ ದಿನಗಳ ಹಿಂದೆ ಕಿರಿಕ್ ನಡೆದಿತ್ತು. ಈ ಕಿರಿಕ್​ನಲ್ಲಿ ವೇಲು ಜೈಲಿಗೂ ಹೋಗಿ ಬಂದಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಇದೇ ತಿಂಗಳ 14ನೇ ತಾರೀಖಿನಂದು ಭರತ್​ನನ್ನು ಮಾರ್ಕೆಟ್ ಜಾಗದ ಬಳಿಯೇ ಕೊಚ್ಚಿ ಕೊಲೆ ಮಾಡಲಾಗಿತ್ತು ಎನ್ನಲಾಗಿದೆ.

ಇದೀಗ ತಲೆಮರೆಸಿಕೊಂಡಿದ್ದಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details