ಕರ್ನಾಟಕ

karnataka

Unlock 3.O: ಇಂದು ಸಿಎಂ ಮಹತ್ವದ ಸಭೆ, ಏನೆಲ್ಲಾ ನಿರ್ಧಾರ ಸಾಧ್ಯತೆ?

By

Published : Jul 3, 2021, 7:26 AM IST

ಅನ್​ಲಾಕ್ 3.O ಜಾರಿ ಕುರಿತು ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ. ಶುಕ್ರವಾರ ಸಂಜೆ 5.30ಕ್ಕೆ ನಿಗದಿಯಾಗಿದ್ದ ಸಭೆ ಮುಂದೂಡಿಕೆಯಾಗಿತ್ತು.

Karnataka Unlock 3.0: CM Yediyurappa To Hold Meeting
Karnataka Unlock 3.O: ಇಂದು ಸಿಎಂ ಮಹತ್ವದ ಸಭೆ, ಏನೆಲ್ಲಾ ನಿರ್ಧಾರ ಸಾಧ್ಯತೆ?

ಬೆಂಗಳೂರು:ಜುಲೈ 5ರಿಂದ ರಾಜ್ಯದಲ್ಲಿ ಅನ್​ಲಾಕ್ 3.O ಜಾರಿಗೆ ಬರಲಿದ್ದು, ಯಾವುದಕ್ಕೆಲ್ಲ ಹೊಸದಾಗಿ ಅವಕಾಶ ನೀಡಬೇಕು, ಯಾವುದಕ್ಕೆಲ್ಲ ನಿರ್ಬಂಧ ಸಡಿಲಿಕೆ ಮಾಡಬೇಕು ಎನ್ನುವ ಕುರಿತು ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ.

ಇಂದು ಸಂಜೆ 5.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಸಭೆ ನಡೆಸಲಿದ್ದು, ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಬಗ್ಗೆ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಯಾವೆಲ್ಲ ವರ್ಗಕ್ಕೆ ಲಾಕ್​ಡೌನ್ ಸಡಿಲಿಕೆ‌ ಮಾಡಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ:ಕ್ರೂರಾತಿಕ್ರೂರ.. ಮೊಬೈಲ್​ ಕಳ್ಳತನ ಮಾಡಲು ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದರು..!

ಪ್ರಾರ್ಥನಾ ಮಂದಿರಗಳಲ್ಲಿ ಭಕ್ತರಿಗೆ ಅವಕಾಶ, ಮಾಲ್, ಮಾರುಕಟ್ಟೆ ಆರಂಭ, ಬಾರ್, ಪಬ್, ಕ್ಲಬ್​ಗಳಿಗೆ ಅವಕಾಶ, ಜಿಮ್​, ವಾಕಿಂಗ್​ಗೆ ಸಂಜೆಯೂ ಅವಕಾಶ, ನೈಟ್ ಕರ್ಫ್ಯೂ ಅವಧಿ ಕಡಿತ, ವ್ಯಾಪಾರ ವಹಿವಾಟು ಸಮಯ ಸಂಜೆ 5 ರಿಂದ 7 ಗಂಟೆಗೆ ವಿಸ್ತರಣೆ ಸೇರಿದಂತೆ ಯಾವುದಕ್ಕೆಲ್ಲ ಅವಕಾಶ ನೀಡಬೇಕು ಎನ್ನುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ನಿನ್ನೆ ಸಭೆ ಮುಂದೂಡಿಕೆ:

ನಿನ್ನೆ ಸಂಜೆ 5.30ಕ್ಕೆ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಿಗದಿಯಾಗಿತ್ತು. ಆದರೆ ಈ ಸಭೆಯನ್ನು ಇಂದಿಗೆ ಮುಂದೂಡಿಕೆ ಮಾಡಲಾಗಿದೆ. ಸೋಮವಾರದಿಂದ ಹೊಸ ಮಾರ್ಗಸೂಚಿ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪ್ರಕಟಕ್ಕೆ ಪೂರಕವಾಗಿ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ:ಬಿಗ್​​ಬಾಸ್​-8: ದೊಡ್ಮನೇಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ABOUT THE AUTHOR

...view details