ಕರ್ನಾಟಕ

karnataka

ಮೂರು ಪಕ್ಷಗಳ ಏಳು ಪರಿಷತ್‌ ಸದಸ್ಯರು ಅವಿರೋಧ ಆಯ್ಕೆ.. ಪ್ರಮಾಣ ಪತ್ರ ಸ್ವೀಕಾರ..

By

Published : Jun 22, 2020, 5:30 PM IST

ವಿಧಾನ ಪರಿಷತ್​​ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು, ಕಾಂಗ್ರೆಸ್​​​ನ ಇಬ್ಬರು ಹಾಗೂ ಒಬ್ಬ ಜೆಡಿಎಸ್ ಪಕ್ಷದ ಸದಸ್ಯ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ..

karnataka mlc polls
'ಎಮ್​​ಎಲ್​​ಸಿ'ಯಾಗಿ ಏಳು ಮಂದಿ ಅವಿರೋಧ ಆಯ್ಕೆ

ಬೆಂಗಳೂರು :ವಿಧಾನ ಸಭೆಯಿಂದ ವಿಧಾನ ಪರಿಷತ್​​ಗೆ ನಡೆದ ಚುನಾವಣೆಯಲ್ಲಿ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ನಾಲ್ವರು, ಕಾಂಗ್ರೆಸ್​​​ನ ಇಬ್ಬರು ಹಾಗೂ ಒಬ್ಬ ಜೆಡಿಎಸ್ ಪಕ್ಷದ ಸದಸ್ಯ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿಯವರಿಂದ‌‌ ಪ್ರಮಾಣ‌ಪತ್ರ ಸ್ವೀಕರಿಸಿದರು.

'ಎಮ್​​ಎಲ್​​ಸಿ'ಯಾಗಿ ಏಳು ಮಂದಿ ಅವಿರೋಧ ಆಯ್ಕೆ..

ನಾಮಪತ್ರ ವಾಪಸ್ ಪಡೆಯಲು ಇಂದು ಮಧ್ಯಾಹ್ನ 3 ಗಂಟೆ ಡೆಡ್​​ಲೈನ್ ಆಗಿತ್ತು‌. ಒಟ್ಟು ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೂಚಕರಿಲ್ಲದೆ ನಾಮಪತ್ರ ಸಲ್ಲಿಸಿದ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿತ್ತು. ಈ ಹಿನ್ನೆಲೆ 7 ಮಂದಿ ಸದಸ್ಯರು ವಿಧಾನಪರಿಷತ್​​ಗೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ಘೋಷಿಸಿದ್ದಾರೆ.

ಕಾಂಗ್ರೆಸ್​​ನಿಂದ ಬಿ ಕೆ ಹರಿಪ್ರಸಾದ್, ನಜೀರ್ ಅಹಮ್ಮದ್, ಬಿಜೆಪಿಯಿಂದ ಎಂಟಿಬಿ ನಾಗರಾಜ್, ಆರ್‌ ಶಂಕರ್, ಸುನೀಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್ ಮತ್ತು ಜೆಡಿಎಸ್​​​ನಿಂದ ಗೋವಿಂದರಾಜು ಅವಿರೋಧವಾಗಿ ಮೇಲ್ಮನೆ ಪ್ರವೇಶ ಮಾಡಿದ್ದಾರೆ.

ABOUT THE AUTHOR

...view details