ಕರ್ನಾಟಕ

karnataka

ETV Bharat / state

ಕನ್ನಡ ಕೋಗಿಲೆ ಸೀಸನ್ 2 ಗ್ರ್ಯಾಂಡ್ ಫಿನಾಲೆ: ಯಾರಾಗಲಿದ್ದಾರೆ ಕರುನಾಡ ಕೋಗಿಲೆ?

ಕನ್ನಡ ಕೋಗಿಲೆ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ ಎಂಟ್ರೀ ಕೊಟ್ಟಿದ್ದು ಮೈಸೂರಿನ ಅಲಾಪ್, ಕೊಪ್ಪಳದ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಮಣ್ಯಂ ಮತ್ತು ಶಿವಮೊಗ್ಗದ ಪಾರ್ಥ ಚಿರಂತನ್ ಕನ್ನಡ ಕೋಗಿಲೆ ಫಿನಾಲೆಗೆ ಎಂಟ್ರಿ ನೀಡಿದ್ದಾರೆ.

By

Published : Aug 2, 2019, 3:38 AM IST

ಕನ್ನಡ ಕೋಗಿಲೆ ಸೀಸನ್ 2

ಬೆಂಗಳೂರು: ಸಂಗೀತ ಲೋಕದಲ್ಲಿ ತನ್ನದೇಯಾದ ಛಾಪು ಮೂಡಿಸಿ ಕನ್ನಡಿಗರ ಮನೆ ಮಾತಾಗಿರುವ ಕಾರ್ಯಕ್ರಮ ಕನ್ನಡ ಕೋಗಿಲೆ ಸೀಸನ್ 2 ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ. ಇದೇ ಆ. 3 ಮತ್ತು 4 ರಾತ್ರಿ 8 ಗಂಟೆಗೆ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ.

ವಾಯಾಕಾಮ್ 18 ಸಮೂಹ ಮೂಲದ ಕಲರ್ಸ್ ಸೂಪರ್​​ ವಾಹಿನಿಯಲ್ಲಿ ಮೂಡಿಬಂದ ಕನ್ನಡ ಕೋಗಿಲೆ ರಾಜ್ಯದ ವಿವಿಧೆಡೆಯಿಂದ ಹಾಡುಗಾರರನ್ನು ಆಯ್ಕೆಮಾಡಿ ವೇದಿಕೆ ಕಲ್ಪಿಸಿಕೊಟ್ಟಿತ್ತು. ಸದ್ಯ ತಮ್ಮ ಹಾಡುಗಾರಿಕೆಯ ಮೂಲಕ ಕರುನಾಡಿನ ಜನರ ಮನವನ್ನು ಸೆಳೆಯುವಲ್ಲಿ ಯಶಸ್ವಿಯಾದ ಗಾಯಕರು ಉತ್ತಮ ಪ್ರದರ್ಶನ ತೋರಿದ್ದು, ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಕೋಗಿಲೆ ಸೀಸನ್ 2 ಗ್ರ್ಯಾಂಡ್ ಫಿನಾಲೆ. ಕೃಪೆ : ಪೇಸ್​ಬುಕ್

ಸಾಧು ಕೋಕಿಲ, ಅರ್ಚನ ಉಡುಪ ಮತ್ತು ಚಂದನ್ ಶೆಟ್ಟಿ ತೀರ್ಪುಗಾರರೊಂದಿಗೆ, ಸಂಗೀತ ನಿರ್ದೇಶಕ ಗುರುಕಿರಣ್ ವಿಶೇಷ ತೀರ್ಪುಗಾರರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೈಸೂರಿನ ಅಲಾಪ್, ಕೊಪ್ಪಳದ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಮಣ್ಯಂ ಮತ್ತು ಶಿವಮೊಗ್ಗದ ಪಾರ್ಥ ಚಿರಂತನ್ ಕನ್ನಡ ಕೋಗಿಲೆ ಫಿನಾಲೆಯಲ್ಲಿ ವೀಕ್ಷಕರನ್ನು ಮತ್ತಷ್ಟು ರಂಜಿಸಲು ಸಜ್ಜಾಗಿದ್ದಾರೆ.

ABOUT THE AUTHOR

...view details