ಕರ್ನಾಟಕ

karnataka

By

Published : Jul 9, 2022, 2:22 PM IST

ETV Bharat / state

ಪೊಲೀಸ್ ಸಬ್ ​ಇನ್ಸ್​ಪೆಕ್ಟರ್ ನೇಮಕಾತಿ ಹಗರಣ: ಕಾಮಾಕ್ಷಿಪಾಳ್ಯದ ಪಿಎಸ್​ಐ ಎಸ್ಕೇಪ್

ಪೊಲೀಸ್ ಸಬ್ ​ಇನ್ಸ್​ಪೆಕ್ಟರ್ ನೇಮಕಾತಿ ಹಗರಣ- ಕಾಮಾಕ್ಷಿಪಾಳ್ಯದ ಪಿಎಸ್​ಐ ಸಿಐಡಿ ತನಿಖೆಯ ವಿಚಾರಣೆಗೆ ಹಾಜರಾಗದೇ ಎಸ್ಕೇಪ್​

Kamakshipalya PSI did not attend the CID inquiry, PSI did not attend the CID inquiry over PSI scam, PSI scam news, PSI scam update, Bengaluru news, ಸಿಐಡಿ ವಿಚಾರಣೆಗೆ ಹಾಜರಾಗದ ಕಾಮಾಕ್ಷಿಪಾಳ್ಯ ಪಿಎಸ್‌ಐ, ಪಿಎಸ್‌ಐ ಹಗರಣದ ಸಿಐಡಿ ವಿಚಾರಣೆಗೆ  ಹಾಜರಾಗದ ಪಿಎಸ್‌ಐ, ಪಿಎಸ್‌ಐ ಹಗರಣ ಸುದ್ದಿ, ಪಿಎಸ್‌ಐ ಹಗರಣ ಅಪ್​ಡೇಟ್​, ಬೆಂಗಳೂರು ಸುದ್ದಿ,
ಕಾಮಾಕ್ಷಿಪಾಳ್ಯದ ಪಿಎಸ್​ಐ

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ-ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ನಗರದ ಕಾಮಾಕ್ಷಿಪಾಳ್ಯದ ಪಿಎಸ್​ಐ ಶರೀಫ್ ಸಿಐಡಿ ವಿಚಾರಣೆಗೆ ಹಾಜರಾಗದೇ ಎಸ್ಕೆಪ್ ಆಗಿರುವುದು ಈಗ ಹಾಟ್​ ಟಾಪಿಕ್​ ಆಗಿದೆ.

ಹೌದು, ಕಾಮಾಕ್ಷಿಪಾಳ್ಯದ ಪಿಎಸ್​ಐ ಸಿಐಡಿ ವಿಚಾರಣಗೆ ಹಾಜರಾಗದೇ ತಲೆಮರಿಸಿಕೊಂಡಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ. ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯದ ಪಿ.ಎಸ್.ಐ ಶರೀಫ್ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಶರೀಫ್ ವಿಚಾರಣೆಗೆ ಹಾಜರಾಗದೇ ಎಸ್ಕೆಪ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಓದಿ:ಪಿಎಸ್​ಐ ಹಗರಣದಲ್ಲಿ ಎಷ್ಟೇ ದೊಡ್ಡ ರಾಜಕಾರಣಿ ಇದ್ದರೂ ಕ್ರಮ ಕೈಗೊಳ್ಳಿ: ಹೆಚ್.ವಿಶ್ವನಾಥ್

ಪಿ.ಎಸ್. ಐ ನೇಮಕಾತಿ ಹಗರಣದಲ್ಲಿ ಪಿಎಸ್​ಐ ಶರೀಫ್ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಅನುಮಾನದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಪಿಎಸ್​ಐ ಶರೀಫ್ ವಿಚಾರಣೆಗೆ ಹಾಜರಾಗದೇ ತಲೆಮರಿಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಶೋಧ ನಡೆಸ್ತಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details