ಕರ್ನಾಟಕ

karnataka

ಜೂನ್ 30-ಜುಲೈ 1ರಂದು ನಗರದ ಬಹುತೇಕ ಕಡೆ ಕಾವೇರಿ ನೀರು ಪೂರೈಕೆ ಬಂದ್

By

Published : Jun 27, 2021, 10:47 PM IST

ಕಾವೇರಿ ಭವನದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಿಂದ ಪ್ರಕಟಣೆ ಹೊರಬಿದ್ದಿದೆ. ಜೂನ್ 30 ಹಾಗೂ ಜುಲೈ 1ರಂದು ಕಾವೇರಿ 4ನೇ ಹಂತದ 1ನೇ ಘಟ್ಟದ ಪಂಪ್ ಹೌಸ್‌ಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ..

B.W.S.S.B.
ಬಿ.ಡಬ್ಲ್ಯೂ.ಎಸ್.ಎಸ್.ಬಿ

ಬೆಂಗಳೂರು :ಜೂನ್ 30 ಹಾಗೂ ಜುಲೈ 1ರಂದು ನಗರದ ಬಹುತೇಕ ಕಡೆ ಕಾವೇರಿ ನೀರು ಪೂರೈಕೆ ಬಂದ್ ಮಾಡಿ ಪ್ರಮುಖ ರಿಪೇರಿ ಕೆಲಸ ಕಾರ್ಯ ಕೈಗೊಳ್ಳಲಿರುವುದಾಗಿ ಬಿಡಬ್ಲ್ಯೂಎಸ್‌ಎಸ್‌ಬಿ ತಿಳಿಸಿದೆ. ಕಾವೇರಿ ಭವನದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಿಂದ ಪ್ರಕಟಣೆ ಹೊರಬಿದ್ದಿದೆ. ಜೂನ್ 30 ಹಾಗೂ ಜುಲೈ 1ರಂದು ಕಾವೇರಿ 4ನೇ ಹಂತದ 1ನೇ ಘಟ್ಟದ ಪಂಪ್ ಹೌಸ್‌ಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.

ಬೆಂಗಳೂರು ಜಲಮಂಡಳಿ ವ್ಯಾಪ್ತಿಯ 950 ಮಿ.ಮೀ ವ್ಯಾಸದ 5.6 ಬೈನೇಜ್‌ನ ನೀರು ಸರಬರಾಜು ಕೊಳವೆ ಮಾರ್ಗದ ಮುಖ್ಯ ಮಾರ್ಗದಲ್ಲಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳಂದು ನೀರು ಸೋರುವಿಕೆಯನ್ನು ತಡೆಗಟ್ಟುವ ಕಾಮಗಾರಿಯನ್ನು ಹಾಗೂ ಟಿ.ಕೆ ಹಳ್ಳ, ಹಾರೋಹಳ್ಳಿ ಹಾಗೂ ತಾತಗುಣಿ ಪಂಪ್ ಹೌಸ್‌ಗಳಲ್ಲಿ ಇತರ ವಿದ್ಯುತ್ ಹಾಗೂ ಮೆಕ್ಯಾನಿಕಲ್ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ನಗರದ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಗರದ ಗಣಪತಿ ನಗರ, ಎಂಇಐ ಕಾಲೋನಿ, ಲಕ್ಷ್ಮಿದೇವಿನಗರ, ಐಹೆಚ್‌ಸಿಎಸ್ ಬಡಾವಣೆ, ಹ್ಯಾಪಿ ವ್ಯಾಲಿ ಬಡಾವಣಿಯ ಕೆಲವು ಭಾಗಗಳು ಮತ್ತು ಉತ್ತರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ 1ನೇ, 4ನೇ ಬ್ಲಾಕ್, 4ನೇ ಸಿ ಬ್ಲಾಕ್, ಜೆ ಬ್ಲಾಕ್, ಮಿಲಿಟರಿ ಕ್ಯಾಂಪಸ್, ಎಸಿಎಸ್ ಸೆಂಟರ್‌, ಸಿದ್ಧಾರ್ಥ ಕಾಲೋನಿ,ವೆಂಕಟಪುರ, ಟೀಚರ್ ಕಾಲೋನಿ, ಜಕ್ಕಸಂದ್ರ, ಎಸ್‌ಟಿಬೆಡ್ ಪ್ರದೇಶ, ಜಯನಗರ 4ನೇ ಬ್ಲಾಕ್, ಅರಸುಕಾಲೋನಿ, ತಿಲಕ್‌ನಗರ, ಎನ್‌ಇಐ ಬಡಾವಣೆ, ಈಸ್ಟ್ ಎಂಡ್ ಮುಖ್ಯರಸ್ತೆಗಳು, ಕೃಷ್ಣಪ್ಪ ಗಾರ್ಡನ್.

ಬಿಹೆಚ್‌ಇಎಲ್ ಬಡಾವಣೆ, ಬಿಟಿಎಂ 2ನೇ ಹಂತ, ಮೈಕೋ ಬಡಾವಣೆ, ಎನ್‌ಎಸ್‌ಪಾಳ್ಯ, ಗುರಪ್ಪನಪಾಳ್ಯ, ಸದ್ದುಗುಂಟೆ ಪಾಳ್ಯ, ಬಿಸ್ಮಿಲ್ಲಾನಗರ, ಜೆಪಿನಗರ 4-8ನೇ ಹಂತ, ಮದ್ದೇನಹಳ್ಳಿ, ಅರಗನ ಹಳ್ಳಿ, ಆರ್‌ಬಿಐ ಬಡಾವಣೆ, ಪಾಂಡುರಂಗನಗರ, ಅರಕೆರೆ, ದೊರೆಸಾನಿ ಪಾಳ್ಯ, ಕೊತ್ತನೂರು ದಿಣ್ಣಿ, ವೆಂಕಟಾದ್ರಿ ಬಡಾವಣಿ, ಚುಂಚಘಟ್ಟ, ಕೋಣನಕುಂಟೆ, ಎಸ್‌ಬಿಎಂ ಬಡಾವಣಿ, ಸುಪ್ರಿಮ್ ರೆಸಿಡೆನ್ಸಿ ಬಡಾವಣಿ, ಲೇಕ್ ಸಿಟಿ, ನಾಡಮ್ಮ ಬಡಾವಣೆ, ರೋಟರಿ ನಗರ, ಕೋಡಿಚಿಕ್ಕನಹಳ್ಳ, ಹೆಚ್‌ಎಸ್‌ಆರ್ ಬಡಾವಣೆ 1 ರಿಂದ 7ನೇ ಸೆಕ್ಟರ್,ಅಗರ, ಮಂಗಮ್ಮನಪಾಳ್ಯ.

ಮದೀನನಗರ, ಐಟಐ ಬಡಾವಣೆ, ಹೊಸಪಾಳ್ಯ, ಬಂಡೆ ಬಿಇಎಂಎಲ್ ಬಡಾವಣಿ 1 ರಿಂದ 5ನೇ ಹಂತ, ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಪಾಳ್ಯ, ಚಂದ್ರ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ, ಮಲ್ಲತ್ತಹಳ್ಳ, ರೈಲ್ವೆಲೇಔಟ್, ಉಲ್ಲಾಳ, ಡಿ ಗ್ರೂಪ್ ಬಡಾವಣೆ, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಬಡಾವಣಿ, ರಾಜಾಜಿನಗರ 6ನೇ ಬ್ಲಾಕ್, ನಂದಿನಿಲೇಔಟ್, ಮಂಜುನಾಥನಗರ.

ಬಸವೇಶ್ವರ ನಗರ, ಗೊರಗುಂಟೆ ಪಾಳ್ಯ, ಶಂಕರನಗರ, ಶಂಕರಮಠ, ಪ್ರಕಾಶ್ ನಗರ, ಕುರುಬರಹಳ್ಳಿ, ಕಮಲಾನಗರ, ಕಾಮಾಕ್ಷಿಪಾಳ್ಯ, ಶಿವನಗರ, ಕೆ.ಹೆಚ್.ಬಿ.ಕಾಲೋನಿ, ದಾಸರಹಳ್ಳಿ ಸೇರಿ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಲು ಬಿ.ಡಬ್ಲ್ಯೂ.ಎಸ್.ಎಸ್.ಬಿ ಕೋರಿದೆ.

ಓದಿ:ಗೆಳೆಯರೊಂದಿಗೆ ಯೂಟ್ಯೂಟ್ ಚಾನಲ್​ ಹೊಂದಿದ್ದವನ ಕಿರಿಕ್​.. ಬರ್ಬರವಾಗಿ ಕೊಚ್ಚಿ ಕೊಂದ ದೋಸ್ತರು

ABOUT THE AUTHOR

...view details