ಬೆಂಗಳೂರು: ಸ್ಪಾ ಹಾಗೂ ಪಬ್ಗಳಿಗೆ ನುಗ್ಗಿ ಮಾಲೀಕರಿಗೆ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ಸಂಪಾದಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಪಾ, ಪಬ್ಗಳ ಮಾಲೀಕರಿಗೆ ಹಣಕ್ಕಾಗಿ ಪತ್ರಕರ್ತನ ಧಮ್ಕಿ ಆರೋಪ: ದೂರು ದಾಖಲಾಗ್ತಿದ್ದಂಗೆ ಪ್ರಭು ನಾಪತ್ತೆ - ಅಂಬಿ ಪತ್ರಿಕೆಯ ಸಂಪಾದಕ ಪ್ರಭು ವಿರುದ್ಧ ದೂರು
ಸ್ಪಾ ಹಾಗೂ ಪಬ್ಗಳಿಗೆ ನುಗ್ಗಿ ಮಾಲೀಕರಿಗೆ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ಸಂಪಾದಕನ ವಿರುದ್ಧ ಪ್ರಕರಣ ದಾಖಲಾಗಿದೆ.
![ಸ್ಪಾ, ಪಬ್ಗಳ ಮಾಲೀಕರಿಗೆ ಹಣಕ್ಕಾಗಿ ಪತ್ರಕರ್ತನ ಧಮ್ಕಿ ಆರೋಪ: ದೂರು ದಾಖಲಾಗ್ತಿದ್ದಂಗೆ ಪ್ರಭು ನಾಪತ್ತೆ Journalist's Scared for owners of spa and clubs](https://etvbharatimages.akamaized.net/etvbharat/prod-images/768-512-5898730-thumbnail-3x2-rail.jpg)
ಸ್ಪಾ ಹಾಗೂ ಕ್ಲಬ್ಗಳ ಮಾಲೀಕರಿಗೆ ಪತ್ರಕರ್ತನ ಧಮ್ಕಿ
ಸಂಪಾದಕ ಪ್ರಭು ಎಂಬಾತ ನಗರದ ವಿವಿಧ ಕಡೆಗಳಲ್ಲಿರುವ ಸ್ಪಾ ಹಾಗೂ ಪಬ್ಗಳಿಗೆ ಹೋಗಿ, ಕಾನೂನು ಬಾಹಿರವಾಗಿ ಸ್ಪಾ ನಡೆಸುತ್ತಿದ್ದೀರಾ ಎಂದು ಮಾಲೀಕರಿಗೆ ಧಮ್ಕಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.
ಈ ಸಂಬಂಧ ಮಾಲೀಕರು ಮಾರತ್ ಹಳ್ಳಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ. ಈತ ಈ ಹಿಂದೆಯೂ ನಗರದ ಬೇರೆ ಬೇರೆ ಪಬ್ ಹಾಗೂ ಸ್ಪಾಗಳಿಗೆ ಹೋಗಿ, ಮಾಲೀಕರ ಬಳಿ ಹಣ ಕೇಳುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಎನ್ನಲಾಗ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.