ಕರ್ನಾಟಕ

karnataka

ETV Bharat / state

ಗೃಹ ಸಚಿವರ ವಿರುದ್ಧ ಷಡ್ಯಂತ್ರ ರೂಪಿಸಿದ ಪ್ರಕರಣ: ಪೋಸ್ಟ್ ಕಾರ್ಡ್​ನ ಸಂಪಾದಕನಿಗೆ ಜಾಮೀನು

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ‌ ಗೃಹ ಸಚಿವ ಎಂ.ಬಿ.ಪಾಟೀಲ್​ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ನಂಬಿಸಲು ಎಂ. ಬಿ. ಪಾಟೀಲ್ ಲೆಟರ್ ಹೆಡ್​ ಇರುವ ನಕಲಿ ಪತ್ರವನ್ನು ವೈರಲ್​ ಮಾಡಿದ ಆರೋಪ ಈತನ ಮೇಲಿದೆ

By

Published : Apr 27, 2019, 4:43 AM IST

ಪೋಸ್ಟ್ ಕಾರ್ಡ್​ನ ಸಂಪಾದಕನಿಗೆ ಜಾಮೀನು

ಬೆಂಗಳೂರು: ಗೃಹ ಸಚಿವ ಎಂ. ಬಿ. ಪಾಟೀಲ್ ಲೆಟರ್ ಹೆಡ್ ನಕಲಿ‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ವಿಕ್ರಮ್ ಹೆಗ್ಡೆಗೆ ಮಧ್ಯಂತರ ಜಾಮೀನು ನೀಡಿ‌ ಜನಪ್ರತಿನಿಧಿಗಳ ‌ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಹೇಶ್ ವಿಕ್ರಮ್ ಹೆಗ್ಡೆ ‌ಪೋಸ್ಟ್ ಕಾರ್ಡ್ ವೆಬ್ ಪೋರ್ಟಲ್ ಸಂಪಾದಕನಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ‌ ಗೃಹ ಸಚಿವ ಎಂ.ಬಿ.ಪಾಟೀಲ್​ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ನಂಬಿಸಲು ಎಂ. ಬಿ. ಪಾಟೀಲ್ ಲೆಟರ್ ಹೆಡ್​ ಇರುವ ನಕಲಿ ಪತ್ರವನ್ನು ವೈರಲ್​ ಮಾಡಿದ ಈತನ ಮೇಲಿದೆ.

ಈ ಸಂಬಂಧ ಎಂ.ಬಿ.ಪಾಟೀಲ್ ವಿಜಯಪುರದಲ್ಲಿ ದೂರು ದಾಖಲಿಸಿದ್ದರು. ನಂತರ ಈಪ್ರಕರಣವನ್ನು‌ ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ರು.ಇದೀಗ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ.

For All Latest Updates

TAGGED:

ABOUT THE AUTHOR

...view details