ಕರ್ನಾಟಕ

karnataka

ಕಲಾಪ ಮುಂದೂಡಿಕೆ... ಮತ್ತೆ ರೆಸಾರ್ಟ್​ಗೆ ಆಗಮಿಸಿದ ಜೆಡಿಎಸ್​ ಶಾಸಕರು

By

Published : Jul 20, 2019, 2:11 AM IST

ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಿದ ಕಾರಣ ವಿಶ್ವಾಸಮತಯಾಚನೆ ಸಭೆಗೆ ಹಾಜರಾಗಿದ್ದ ಎಲ್ಲಾ ಜೆಡಿಎಸ್ ಶಾಸಕರು, ಇನ್ನು ಮೂರು ದಿನಗಳ ಕಾಲ ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಜೆಡಿಎಸ್ ಶಾಸಕರು

ಬೆಂಗಳೂರು:ವಿಧಾನಸೌಧದಲ್ಲಿ ನಡೆದ ವಿಶ್ವಾಸಮತಯಾಚನೆ ಸಭೆಯ ಚರ್ಚಾ ವಿಷಯದಲ್ಲಿ ಭಾಗವಹಿಸಲು ಶುಕ್ರವಾರ ತೆರಳಿದ್ದ ಜೆಡಿಎಸ್ ಶಾಸಕರು ಕಲಾಪ ಮೂಂದೂಡಿದ ಕಾರಣ, ಮತ್ತೆ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ಗೆ ಆಗಮಿಸಿದ್ದಾರೆ.

ಎಲ್ಲಾ ಜೆಡಿಎಸ್ ಶಾಸಕರು ಖಾಸಗಿ ಬಸ್​ನಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ರೆಸಾರ್ಟ್​ಗೆ ಆಗಮಿಸಿದ್ದಾರೆ. ಶುಕ್ರವಾರ ವಿಶ್ವಾಸಮತ ಯಾಚನೆಯನ್ನು ಸಿಎಂ ಮಾಡದ ಕಾರಣ ಹಾಗೂ ಅಧಿವೇಶನವನ್ನು ಸೋಮವಾರಕ್ಕೆ ಸ್ಪೀಕರ್ ಮುಂದೂಡಿದ ಪರಿಣಾಮ ಶಾಸಕರು ಇನ್ನು ಮೂರು ದಿನಗಳ ಕಾಲ ರೆಸಾರ್ಟ್​ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಸುರಕ್ಷಿತವಾಗಿ ರೆಸಾರ್ಟ್ ಗೆ ಆಗಮಿಸಿದ ಜೆಡಿಎಸ್ ಶಾಸಕರು

ಇಂದು ಮತ್ತು ನಾಳೆ ಸರ್ಕಾರಿ ರಜೆ ಇದ್ದು, ಈ ಎರಡು ದಿನಗಳಲ್ಲಿ ಶಾಸಕರು ರೆಸಾರ್ಟ್​ನಿಂದ ಹೊರ ಬರುವುದು ಅನುಮಾನವಾಗಿದೆ. ಇಂದು ರೆಸಾರ್ಟ್​ಗೆ ಆಗಮಿಸಿದಾಗಲೂ ಯಾವೊಬ್ಬ ಶಾಸಕ ಸಹ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.

For All Latest Updates

TAGGED:

Devanahalli

ABOUT THE AUTHOR

...view details