ಕರ್ನಾಟಕ

karnataka

By

Published : Jul 16, 2019, 9:33 PM IST

ETV Bharat / state

ಮೈತ್ರಿ ಸರ್ಕಾರ‌ ಉಳಿಸಿಕೊಳ್ಳಲು ಸಚಿವರಿಂದ ವಿಶೇಷ ಪೂಜೆ

ಸಹಕಾರ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಪ್ರೆಸ್ಟೀಜ್ ಗಾಲ್ಫ್​​ ಶೈರ್ ರೆಸಾರ್ಟ್ ಬಳಿಯಲ್ಲಿರುವ ಕತ್ತಿಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಮೈತ್ರಿ ಸರ್ಕಾರ ಉಳಿಯಲು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಸರ್ಕಾರ‌ ಉಳಿಸಿಕೊಳ್ಳಲು ಜೆಡಿಎಸ್ ಸಚಿವರಿಂದ ದೇವರ ಮೊರೆ

ಬೆಂಗಳೂರು: ದಿನ ಕಳೆದಂತೆ ಶಾಸಕರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗುತ್ತಿದೆ. ಸರ್ಕಾರ ಉಳಿಸಿಕೊಳ್ಳಲು ಒಬ್ಬರ ಹಿಂದೆ ಮತ್ತೊಬ್ಬರು ದೇಗುಲಗಳಿಗೆ ಹೋಗುವುದು, ಪೂಜೆ, ಹೋಮ ಹವನಗಳನ್ನು ಮಾಡಿಸುವುದು ನಿರಂತರ ಕಾಯಕವಾದಂತಿದೆ.

ಸದ್ಯ ಈ ಕಾಯಕದಲ್ಲಿ ನಿರತರಾಗಿರುವವರು ಸಹಕಾರ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ. ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ಕಾಲ ಕಳೆಯುತ್ತಿದ್ದ ಸಚಿವರು, ರೆಸಾರ್ಟ್ ಬಳಿಯಲ್ಲಿರುವ ಕತ್ತಿಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಮೈತ್ರಿ ಸರ್ಕಾರ ಉಳಿಯಲು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ABOUT THE AUTHOR

...view details