ಕರ್ನಾಟಕ

karnataka

ETV Bharat / state

ದೋಸ್ತಿ ನಾಯಕರ ಬೇಜವಾಬ್ದಾರಿತನದ ಪರಮಾವಧಿ : ಗಳಿಗೆ ನೋಡಿ ಸದನಕ್ಕೋದ ನಾಯಕರು

ಬೆಳಗ್ಗೆ 10 ಗಂಟೆಗೆ ಸದನ ಪ್ರಾರಂಭ ಮಾಡಬೇಕೆಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದರೂ ಕೂಡ ದೋಸ್ತಿ ಸರ್ಕಾರದ ನಾಯಕರು ಸದನಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ. ಬೆ. 10.30ರ ಶುಭ ಗಳಿಗೆ ನೋಡಿಕೊಂಡೇ ಸದನಕ್ಕೆ ಹಾಜಾರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

By

Published : Jul 23, 2019, 11:50 AM IST

Updated : Jul 23, 2019, 2:47 PM IST

ಗಂಟೆ ಹತ್ತಾದರು ಸದನಕ್ಕೋಗದ ನಾಯಕರು

ಬೆಂಗಳೂರು: ಹತ್ತು ಗಂಟೆಗೆ ಸದನ ಪ್ರಾರಂಭ ಮಾಡಬೇಕೆಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದರೂ ಕೂಡ ದೋಸ್ತಿ ಸರ್ಕಾರದ ನಾಯಕರು ಸದನಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದು, 10.30ರ ಶುಭ ಗಳಿಗೆ ನೋಡಿ ಸದನಕ್ಕೆ ಹೋಗಿದ್ದರು. ಈ ವಿಷಯ ಈಗ ಭರ್ಜರಿ ಚರ್ಚೆಯಾಗುತ್ತಿದೆ.

ಗಂಟೆ ಹತ್ತಾದರೂ ಸದನಕ್ಕೆ ಹೋಗಿರಲಿಲ್ಲ ಜೆಡಿಎಸ್​ ಶಾಸಕರು

ಈಗಾಗಲೇ ಸದನದೊಳಗೆ ಸ್ಪೀಕರ್​ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಹಾಜರಿದ್ದಾರೆ. ಹಾಗೇ ದೋಸ್ತಿ ಪಾಳಯದಲ್ಲಿ ಎ.ಟಿ. ರಾಮಸ್ವಾಮಿ, ಸಚಿವ ಪ್ರಿಯಂಕ ಖರ್ಗೆ ಸದನಕ್ಕೆ ಹಾಜರಾಗಿದ್ದರು. ಆದ್ರೆ ಇತರ ದೋಸ್ತಿ ನಾಯಕರು ಸುಪ್ರೀಂಕೋರ್ಟ್​​ ವಿಚಾರಣೆ ನೋಡಿಕೊಂಡು ಸದನಕ್ಕೆ ಬರುವ ಹುನ್ನಾರದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದವು.

ಇದೀಗ ಮೈತ್ರಿ ಪಾಳಯದ ನಾಯಕರು ರೆಸಾರ್ಟ್​​ನಿಂದ ಬಸ್​ ಮುಖಾಂತರ ಸದನಕ್ಕೆ ತೆರಳಿದ್ದರು.

ಸ್ಪೀಕರ್ ಬೇಸರ :

ಸ್ಪೀಕರ್ ರಮೇಶ್ ಕುಮಾರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಸದಸ್ಯರು ಆಗಮಿಸುವುದು ತಡವಾದಂತೆ ಮಹತ್ವದ ಸಮಯ ವ್ಯರ್ಥವಾಗಲಿದೆ. ಭಾಷಣಕ್ಕೆ ಅವರಿಗೆ ಅವಕಾಶ ಕಡಿಮೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

Last Updated : Jul 23, 2019, 2:47 PM IST

ABOUT THE AUTHOR

...view details