ಕರ್ನಾಟಕ

karnataka

ETV Bharat / state

ದಳಪತಿಗಳ ನಾಮಪತ್ರ ಸಲ್ಲಿಕೆ: ಅಭ್ಯರ್ಥಿಗಳಿಗೆ ಹೆಚ್​ಡಿಕೆ ಸಾಥ್​! - ನಾಳೆ ನಾಮಪತ್ರ ಸಲ್ಲಿಸಲಿರುವ ಜೆಡಿಎಸ್​ ಅಭ್ಯರ್ಥಿಗಳು

ಮಾಜಿ ಸಿಎಂ ಕುಮಾರಸ್ವಾಮಿ ಅವರು ನಾಳೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳಿಗೆ‌ ಸಾಥ್​ ನೀಡಲಿದ್ದಾರೆ. ಈ ಮೂಲಕ ಉಪ ಚುನಾವಣಾ ಕಣದ ಕಾವು ಮತ್ತಷ್ಟು ಹೆಚ್ಚಸಲಿದ್ದಾರೆ.

JDC

By

Published : Nov 17, 2019, 11:15 PM IST

Updated : Nov 18, 2019, 7:15 AM IST

ಬೆಂಗಳೂರು:ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್ ಅಭ್ಯರ್ಥಿಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಾಥ್​ ನೀಡಲಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅಭ್ಯರ್ಥಿಗಳಿಗೆ‌ ಸಾಥ್​ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಶಿವಾಜಿನಗರ ಅಭ್ಯರ್ಥಿ ತನ್ವೀರ್ ಅಹಮ್ಮದ್ ನಾಮಪತ್ರ ಸಲ್ಲಿಕೆ ವೇಳೆ ಹೆಚ್​ಡಿಕೆ ಭಾಗವಹಿಸಲಿದ್ದು, ಅದಾದ ಬಳಿಕ 11.30ಕ್ಕೆ ಯಶವಂತಪುರ ಕ್ಷೇತ್ರ ಅಭ್ಯರ್ಥಿ ಜವರಾಯಿ ಗೌಡರು ಹೇರೋಹಳ್ಳಿ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ನಾಳೆ ಹೆಚ್​ಡಿಕೆ ಕೈಗೊಳ್ಳಲಿರುವ ಪ್ರವಾಸದ ಪಟ್ಟಿ

ಮಧ್ಯಾಹ್ನ 12.30ಕ್ಕೆ ಚಿಕ್ಕಬಳ್ಳಾಪುರಕ್ಕೆ ತೆರಳಲಿರುವ ಹೆಚ್​ಡಿಕೆ, ತಮ್ಮ ಅಭ್ಯರ್ಥಿ ಬಚ್ಚೇಗೌಡರ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿರಲಿದ್ದಾರೆ. ಬಳಿಕ ಬೆಳಗಾವಿಗೆ ಹೋಗಿ ಗೋಕಾಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಕೆಗೆ ಭಾಗಿಯಾಗಲಿದ್ದಾರೆ. ನಂತರ ಅಥಣಿ ಹಾಗೂ ಕಾಗವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆಯೂ ಕುಮಾರಸ್ವಾಮಿ ಹಾಜರಿರಲಿದ್ದಾರೆ.

Last Updated : Nov 18, 2019, 7:15 AM IST

ABOUT THE AUTHOR

...view details