ಕರ್ನಾಟಕ

karnataka

ಇಸ್ರೋ ಪರಿವರ್ತನೆಯ ವಿಭಿನ್ನ ಹಂತಗಳು, ನೋವಿನ ಘಟನೆಗಳನ್ನು ದಾಟಿ ಮುಂದೆ ಸಾಗಿದೆ: ಎಸ್ ಸೋಮನಾಥ್

By ETV Bharat Karnataka Team

Published : Sep 23, 2023, 9:49 PM IST

ಬೆಂಗಳೂರಿನ ಜಯ ನಗರದ ಆರ್‌.ವಿ. ಶಿಕ್ಷಕರ ಕಾಲೇಜಿನಲ್ಲಿ ಇಸ್ರೋದ ವೈಯಕ್ತಿಕ ಇತಿಹಾಸ ಎನ್ನುವ ಪುಸ್ತಕ ಕುರಿತ ಚರ್ಚೆಯನ್ನು ಆಯೋಜಿಸಲಾಗಿಯಿತು.

ISRO
ಇಸ್ರೋ ಪರಿವರ್ತನೆಯು ವಿಭಿನ್ನ ಹಂತಗಳು, ನೋವಿನ ಘಟನೆಗಳನ್ನು ದಾಟಿ ಸಾಗಿದೆ: ಎಸ್. ಸೋಮನಾಥ್

ಬೆಂಗಳೂರು:''ಇಸ್ರೋ ಸಂಸ್ಥೆಯ ಆರಂಭಿಕ ವರ್ಷಗಳಲ್ಲಿ ರಾಮಭದ್ರನ್ ಅರವಾಮುದನ್ ಸೇರಿದಂತೆ ಅನೇಕ ಧೀಮಂತರನ್ನು ಹೊಂದಿತ್ತು. ಅಲ್ಲಿ ಕನಸುಗಾರರರಿದ್ದರು. ಸಂಸ್ಥೆಯ ಪರಿವರ್ತನೆಯ ವಿಭಿನ್ನ ಹಂತಗಳನ್ನು ಮತ್ತು ವಿವಿಧ ನೋವಿನ ಘಟನೆಗಳನ್ನು ದಾಟಿ ಸಾಗಿದೆ. ವಿಕ್ರಮ್ ಸಾರಾಭಾಯ್ ಅವರು ಉತ್ಸಾಹಿ ವಿಜ್ಞಾನಿಗಳೊಂದಿಗೆ ಈ ಕನಸಿನ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ರಾಮಭದ್ರನ್ ಅವರಲ್ಲಿ ಒಬ್ಬರಾಗಿದ್ದರು'' ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದರು.

ಜಯ ನಗರದ ಆರ್‌.ವಿ. ಶಿಕ್ಷಕರ ಕಾಲೇಜಿನಲ್ಲಿ ಇಸ್ರೋದ ವೈಯಕ್ತಿಕ ಇತಿಹಾಸ ಎನ್ನುವ ಪುಸ್ತಕ ಕುರಿತ ಚರ್ಚೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸೋಮನಾಥ್ ಅವರು, ''ಆರಂಭಿಕ ಹಂತದಲ್ಲಿ ಇಸ್ರೋ ಅಭಿವೃದ್ಧಿ ಅಸ್ತವ್ಯಸ್ತವಾಗಿತ್ತು. ವಿವಿಧ ಸಾಮರ್ಥ್ಯಗಳನ್ನು ಅನ್ವೇಷಿಸಲು ಹಲವು ವಿಧಾನಗಳನ್ನು ಅನುಸರಿಸಲಾಗಿತ್ತು. ಅನೇಕ ಸ್ಥಳಗಳಲ್ಲಿ ಅನ್ವೇಷನೆಗಳು ನಡೆಯುತ್ತಿದ್ದವು. ರಾಮಭದ್ರನ್ ಅರವಾಮುದನ್ ಇಂತಹ ಅನಿಶ್ಚಿತ ಸನ್ನಿವೇಶಗಳನ್ನು ತುಂಬಾ ಎದುರಿಸಿದ್ದರು'' ಎಂದು ವಿವರಿಸಿದರು.

ಇಸ್ರೋದ ವೈಯಕ್ತಿಕ ಇತಿಹಾಸ ಎನ್ನುವ ಪುಸ್ತಕ ಕುರಿತ ಚರ್ಚೆಯನ್ನು ಆಯೋಜಿಸಲಾಗಿಯಿತು

''ಸತೀಶ್ ಧವನ್ ಈ ಸಂಸ್ಥೆಯ ನಡಿಗೆಗೆ ನೂತನ ರೂಪ ಕೊಟ್ಟರು. ಮುಂದಿನ ಕೆಲಸಗಳನ್ನು ಮಾಡಲು ಹಂತ ಹಂತವಾಗಿ ನಿರ್ದೇಶನಗಳನ್ನು ನೀಡಿದವರು ಅವರಾಗಿದ್ದರು. ಹಲವು ದಿಕ್ಕುಗಳಲ್ಲಿ ಇದ್ದ ಗುರಿಗಳನ್ನು ಹೊಂದಿಸಿದ್ದರು. ಕೆಲವು ವಿಷಯಗಳನ್ನು ಸಂಸ್ಥೆಗೆ ಕಡ್ಡಾಯಗೊಳಿಸಿದ್ದರು. ಇದರ ಪರಿಣಾಮ ಸಂಶೋಧನಾ ಪ್ರಬಂಧಗಳ ಪ್ರಕಟಣೆ, ಆರ್ ಅಂಡ್ ಡಿ ಮತ್ತು ಶಿಕ್ಷಣಕ್ಕೆ ಅಷ್ಟೇ ಅಂಟಿಕೊಳ್ಳದ ರೀತಿಯಲ್ಲಿ ಇಸ್ರೋವನ್ನು ಅಭಿವೃದ್ಧಿಪಡಿಸಲಾಯಿತು. ಆದ್ದರಿಂದ ಅಭಿಪ್ರಾಯಪಟ್ಟ ಸಾರ್ವಜನಿಕರಿಗೆ ಸಂಬಂಧಿಸಿದ ಫಲಿತಾಂಶವನ್ನು ಸಂಸ್ಥೆ ನೀಡಲು ಪ್ರಾರಂಭಿಸಿತು. ಸಂಸ್ಥೆಗೆ ಒಂದು ಆಕಾರ ಸಿಕ್ಕಿತು'' ಎಂದರು.

''ನಂತರ ಸಾಮಾಜಿಕ, ಸರ್ಕಾರಿ ಮತ್ತು ಆಡಳಿತಗಳ ಅಗತ್ಯಗಳನ್ನು ಪೂರೈಸಲು ಸಂಸ್ಥೆ ಪ್ರಾರಂಭಿಸಿತು. ಮುಂದೆ ವಿವಿಧ ಆಯಾಮದಲ್ಲಿ ಸ್ಫೂರ್ತಿದಾಯಕ ಸಂಸ್ಥೆ ಎಂದು ಬಿಂಬಿಸಲ್ಪಟ್ಟಿತು. ಅಂದು ಅಸ್ತಿತ್ವದಲ್ಲಿದ್ದ ನಾಯಕತ್ವದಿಂದ ಈ ಪರಿವರ್ತನೆ ಸಾಧ್ಯವಾಯಿತು. ವಿಕ್ರಮ್ ಸಾರಾಭಾಯ್ ಮತ್ತು ಸತೀಶ್ ಧವನ್ ಯುಗವನ್ನು ಇಸ್ರೋಗೆ ಜೀವ ನೀಡಿದ ನಾಯಕತ್ವ ಎಂದು ಕರೆಯಬಹುದು'' ಎಂದು ವ್ಯಾಖ್ಯಾನಿಸಿದರು.

''ಅರವಾಮುದನ್ ಅನೇಕ ಮಹಾನ್ ಜನರೊಂದಿಗೆ ಇಸ್ರೋದ ಪ್ರಾರಂಭಿಕ ಪ್ರಯಾಣದ ಅವಿಭಾಜ್ಯ ಅಂಗವಾಗಿದ್ದರು. ಅದೇ ಮಾದರಿಯಲ್ಲಿ ಸಂಸ್ಥೆಯ ವೈಯಕ್ತಿಕ ಇತಿಹಾಸ ಪುಸ್ತಕವು ದಂಪತಿಗಳ ದೃಷ್ಟಿಕೋನವನ್ನು ಹೊಂದಿದೆ. ಇದು ಇಸ್ರೋದ ಅನಿರೀಕ್ಷಿತ ವಿಷಯಗಳನ್ನು ಹೊಂದಿದೆ. 40-50 ವರ್ಷಗಳ ಹಿಂದಿನ ಸಂಸ್ಥೆಯ ಬದಲಾವಣೆಯು ಹೆಚ್ಚು ವೇಗವಾಗಿ, ಸ್ಪಷ್ಟವಾಗಿ ಈ ಪುಸ್ತಕ ವ್ಯಾಖ್ಯಾನಿಸುತ್ತದೆ. ಅರವಾಮುದನ್ ಅವರ ಸೇವೆಯು ಈ ಸಂಸ್ಥೆಯಲ್ಲಿ ಕೊನೆಗೊಂಡ ನಂತರ ನಾನು ಸೇರಿಕೊಂಡಿದ್ದರಿಂದ ನಾನು ಸೇರಿದಂತೆ ಇತರ ಯಾವುದೇ ಜನರು ವೇಗದ ಬದಲಾವಣೆಗಳನ್ನು ನೋಡಲಾಗಲಿಲ್ಲ'' ಎಂದು ಅಭಿಪ್ರಾಯಪಟ್ಟರು.

ಇಸ್ರೋ ಅಧ್ಯಕ್ಷರ ಭಾಷಣದ ನಂತರದ ವಿಚಾರ ಮಂಥನವನ್ನು ಅರ್ಥ ಸ್ಕೂಲ್ ಆಫ್ ಎಂಟರ್‌ಪ್ರೆನ್ಯೂರ್‌ಶಿಪ್‌ನ ಸಹ ಸಂಸ್ಥಾಪಕ ಮತ್ತು ಏಂಜೆಲ್ ಇನ್ವೆಸ್ಟರ್ ಟಿ.ಎನ್. ಹರಿ ನಿರ್ವಹಿಸಿದರು. ಖ್ಯಾತ ಪತ್ರಕರ್ತೆ ಮತ್ತು ಪುಸ್ತಕದ ಲೇಖಕರಾದ ಗೀತಾ ಅರಾವಮುದನ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಉತ್ತರ ಕರ್ನಾಟಕದ ವಿಶಿಷ್ಟ ಆಚರಣೆ.. ಮನೆ ಮನೆಗೆ ಸಮೃದ್ಧಿ ಹೊತ್ತು ತರುವ ಜೋಕುಮಾರಸ್ವಾಮಿ

ABOUT THE AUTHOR

...view details