ಕರ್ನಾಟಕ

karnataka

ETV Bharat / state

ಕಲ್ಯಾಣ ಕರ್ನಾಟಕ ಕಡೆಗಣಿಸಿರುವ ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಬೃಹತ್​ ಪ್ರತಿಭಟನೆ ನಡೆಸಲು ತೀರ್ಮಾನ: ಈಶ್ವರ್ ಖಂಡ್ರೆ - Ishwar khandre spoke on protest in kalburgi

ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಜೊತೆ ಸಭೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಂದು 31 ತಿಂಗಳಾಯ್ತು. ಕಲ್ಯಾಣ ಕರ್ನಾಟಕ ಕಡೆಗಣಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.

ishwar-khandre-spoke-on-protest-in-kalburgi
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

By

Published : Feb 17, 2022, 11:00 PM IST

ಬೆಂಗಳೂರು: ಬಜೆಟ್ ಅಧಿವೇಶನ ಪೂರ್ವದಲ್ಲಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಲ್ಯಾಣ ಕರ್ನಾಟಕದ ಭಾಗದ ಶಾಸಕರು ನಿರ್ಧರಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ರಾತ್ರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಭೆ ನಡೆಸಿದ ಶಾಸಕರು ಈ ತೀರ್ಮಾನ ಕೈಗೊಂಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಈಶ್ವರ ಖಂಡ್ರೆ ಅವರು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಜೊತೆ ಸಭೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಂದು 31 ತಿಂಗಳಾಯ್ತು. ಕಲ್ಯಾಣ ಕರ್ನಾಟಕ ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ ಉದ್ಯೋಗ, ಶಿಕ್ಷಣದಲ್ಲಿ ವಿಶೇಷ ಸ್ಥಾನಮಾನವಿದೆ. ಅದನ್ನು ಕಡೆಗಣಿಸುವ ಕೆಲಸ ಸರ್ಕಾರ ಮಾಡಿದೆ.‌ ಇದುವರೆಗೂ ಒಂದೇ ಒಂದು ಉದ್ಯೋಗ ಭರ್ತಿ ಮಾಡಿಲ್ಲ. 260 ಕೋಟಿ ರೂ. ಮಾತ್ರ ಇಲ್ಲಿವರೆಗೆ ಖರ್ಚಾಗಿದೆ. ಇದು ಯಾವ ಸೀಮೆಯ ಅಭಿವೃದ್ಧಿ ಎಂದು ಕಿಡಿಕಾರಿದರು.

ಪಿಎಸ್​ಐ ಹುದ್ದೆಗಳಲ್ಲಿ ವಂಚನೆಯಾಗಿದೆ. ನಮ್ಮ ಭಾಗದ ಯುವಕರಿಗೆ ವಂಚನೆಯಾಗಿದೆ.‌ ಇರುವ ಎಲ್ಲಾ ಹುದ್ದೆಗಳನ್ನ‌ಭರ್ತಿ ಮಾಡಬೇಕು. 17,700 ಶಿಕ್ಷಕರ ಹುದ್ದೆ ಖಾಲಿ ಇವೆ. ಈ ಹುದ್ದೆಗಳಲ್ಲಿ ಕೆಲವು ಮಾನದಂಡಗಳಿವೆ. ಇವುಗಳನ್ನು ಮೊದಲು ಸಡಿಲ ಮಾಡಬೇಕು ಎಂದು ಒತ್ತಾಯಿಸಿದರು.

ನೀರಾವರಿ ಯೋಜನೆ ಪೂರ್ಣಗೊಳ್ಳುತ್ತಿಲ್ಲ. ಹೀಗಾಗಿ, ಸರ್ಕಾರದ ಗಮನಕ್ಕೆ ತರುವ ಉದ್ದೇಶ. ಬಜೆಟ್ ಮುನ್ನ ಬೃಹತ್ ಸಮಾವೇಶ ಮಾಡ್ತೇವೆ. ಕಲಬುರಗಿಯಲ್ಲಿ ಮಾರ್ಚ್ 2 ಇಲ್ಲವೇ 5 ರಂದು ಧರಣಿ ಮಾಡ್ತೇವೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಶಾಸಕರಾದ ಅಜಯ್ ಸಿಂಗ್, ತುಕಾರಾಂ, ಪ್ರಿಯಾಂಕಾ ಖರ್ಗೆ ಸೇರಿದಂತೆ ಕಲ್ಯಾಣ ಕರ್ನಾಟಕದ ಶಾಸಕರು ಭಾಗವಹಿಸಿದ್ದರು.

ಓದಿ:ಅಹೋರಾತ್ರಿ ಧರಣಿ ನಿರತರೊಂದಿಗೆ ಸಂಧಾನ ವಿಫಲ, ನಾಳೆ ಮತ್ತೆ ಸಭೆ: ಬಿಎಸ್​​ವೈ

For All Latest Updates

TAGGED:

ABOUT THE AUTHOR

...view details