ಕರ್ನಾಟಕ

karnataka

By

Published : Sep 13, 2020, 12:17 PM IST

ETV Bharat / state

ಎಫ್​​ಎಸ್​ಎಲ್ ಕೇಂದ್ರಕ್ಕೆ ನಟಿಮಣಿಯರು: ಸಿಸಿಬಿ ಅಧಿಕಾರಿ ಅಂಜುಮಾಲಾರಿಂದ ತೀವ್ರ ವಿಚಾರಣೆ

ನಟಿಯರಾದ ಸಂಜನಾ ಮತ್ತು ರಾಗಿಣಿ ಅವರ ಸಿಸಿಬಿ ಕಸ್ಟಡಿ ಅವಧಿ ನಾಳೆಗೆ ಅಂತ್ಯವಾಗಲಿದ್ದು, ಇಂದು ಸಿಸಿಬಿ ಅಧಿಕಾರಿ ಅಂಜುಮಾಲಾ ಅವರು ನಟಿಯರನ್ನು ತೀವ್ರ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಸದ್ಯ ತನಿಖಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ರಾಗಿಣಿ ಮತ್ತು ಸಂಜನಾ ಪೂರಕವಾಗಿ ಉತ್ತರ ಕೊಡುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Intensive investigation by CB officer Anjumala
ಎಫ್​​ಎಸ್​ಎಲ್ ಕೇಂದ್ರಕ್ಕೆ ನಟಿಮಣಿಯರು; ಸಿಸಿಬಿ ಅಧಿಕಾರಿ ಅಂಜುಮಾಲಾರಿಂದ ತೀವ್ರ ತನಿಖೆ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಸಾಂತ್ವನ ಕೇಂದ್ರಕ್ಕೆ ಸಿಸಿಬಿ ಇನ್ಸ್​​​ಪೆಕ್ಟರ್​​ ಅಂಜುಮಾಲಾ ಭೇಟಿ ಕೊಟ್ಟು, ನಟಿಮಣಿಯರಾದ ಸಂಜನಾ ಹಾಗೂ ರಾಗಿಣಿಯನ್ನು ಮಡಿವಾಳದ ಎಫ್​​ಎಸ್​ಎಲ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

ಎಫ್​​ಎಸ್​ಎಲ್ ಕೇಂದ್ರಕ್ಕೆ ನಟಿಮಣಿಯರು

ಸಂಜನಾ ಮತ್ತು ರಾಗಿಣಿ ಅವರ ಸಿಸಿಬಿ ಕಸ್ಟಡಿ ನಾಳೆಗೆ ಅಂತ್ಯವಾಗಲಿದ್ದು, ಇಂದು ಸಿಸಿಬಿ ಅಧಿಕಾರಿ ಅಂಜುಮಾಲಾ ಅವರು ನಟಿಯರನ್ನು ಹೆಚ್ಚಿನ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಅಂಜುಮಾಲಾ ಫೈಲ್ ಸಮೇತ ಆಗಮಿಸಿದ್ದು, ಇಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ. ಅಲ್ಲದೇ ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸ್ಪಂದಿಸದೆ ಹೋದರೆ ನಟಿಯರನ್ನು ಕೋರ್ಟ್ ಸಿಸಿಬಿ ಕಸ್ಟಡಿಗೆ ಕೊಡುವ ಸಾಧ್ಯತೆ ಇದೆ.

ತನಿಖಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ರಾಗಿಣಿ ಮತ್ತು ಸಂಜನಾ ಪೂರಕವಾಗಿ ಉತ್ತರ ಕೊಡುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ABOUT THE AUTHOR

...view details