ಕರ್ನಾಟಕ

karnataka

By

Published : Jul 15, 2019, 11:12 PM IST

ETV Bharat / state

ಅಂಧರ ಕ್ರಿಕೆಟ್: ಜಮೈಕಾಗೆ ತೆರಳಲಿದೆ ವಿಶ್ವ ಚಾಂಪಿಯನ್​​ ಟೀಂ ಇಂಡಿಯಾ

ಅಂಧರ ಕ್ರಿಕೆಟ್​ ವಿಶ್ವ ಚಾಂಪಿಯನ್​ ಟೀಂ ಇಂಡಿಯಾವು ಜಮೈಕಾ ಪ್ರವಾಸ ತೆರಳಲಿದೆ.

ಟೀಂ ಇಂಡಿಯಾ

ಬೆಂಗಳೂರು:ಅಂಧರ ಕ್ರಿಕೆಟ್​ ವಿಶ್ವ ಚಾಂಪಿಯನ್​ ಟೀಂ ಇಂಡಿಯಾವು ಸೀಮಿತ ಓವರ್​ಗಳ ಸರಣಿಯಲ್ಲಿ ಭಾಗವಹಿಸಲು ಜಮೈಕಾಗೆ ಪ್ರವಾಸ ಕೈಗೊಳ್ಳಲಿದೆ.

ವಿಶ್ವ ಚಾಂಪಿಯನ್ನರು ಜುಲೈ 18ರಂದು ಬೆಂಗಳೂರಿನಿಂದ ಜಮೈಕಾಗೆ ಪ್ರವಾಸ ಮಾಡಲಿದ್ದಾರೆ. ಸರಣಿಯಲ್ಲಿ ಭಾರತ ತಂಡವು ಜಮೈಕಾ ವಿರುದ್ಧ 3 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನ ಆಡಲಿದೆ. ಜುಲೈ 20ರಂದು ನಡೆಯುವ ಮೊದಲ ಏಕದಿನ ಪಂದ್ಯದ ಮೂಲಕ ಕ್ರಿಕೆಟ್​ ಸರಣಿಗೆ ಆರಂಭವಾಗಲಿದೆ.

ಜಮೈಕಾಗೆ ತೆರಳಲಿದೆ ವಿಶ್ವ ಚಾಂಪಿಯನ್​ ಟೀಂ ಇಂಡಿಯಾ

ವಿಶ್ವಕಪ್​ ಗೆದ್ದ ತಂಡದ ನಾಯಕರಾಗಿದ್ದ ಅಜಯ್​ ರೆಡ್ಡಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಟೀಂ ಇಂಡಿಯಾವು ಸೀಮಿತ ಓವರ್​ಗಳ ಸರಣಿಯಲ್ಲಿ ಭಾಗವಹಿಸಲು ಜಮೈಕಾಗೆ ಪ್ರವಾಸ ಕೈಗೊಳ್ಳುತ್ತಿದೆ.

For All Latest Updates

TAGGED:

ABOUT THE AUTHOR

...view details