ಕರ್ನಾಟಕ

karnataka

By

Published : Jan 14, 2020, 9:15 AM IST

ETV Bharat / state

ಹಿಂದುತ್ವ ಪ್ರತಿಪಾದಿಸುವ ಉದ್ದೇಶದಿಂದ ಪೌರತ್ವ ಕಾಯ್ದೆ ಜಾರಿಗೆ : ಹೆಚ್.ಎಸ್.ದೊರೆಸ್ವಾಮಿ ಆರೋಪ

ಭಾರತ ದೇಶವನ್ನು ಒಡೆದು ಹಿಂದುತ್ವ ಪ್ರತಿಪಾದಿಸುವ ಉದ್ದೇಶದಿಂದ ಪೌರತ್ವ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಆಪಾದಿಸಿದ್ದಾರೆ.

h-s-doreswamy
ಹೆಚ್.ಎಸ್.ದೊರೆಸ್ವಾಮಿ

ಬೆಂಗಳೂರು:ಭಾರತ ದೇಶವನ್ನು ಒಡೆದು ಹಿಂದುತ್ವ ಪ್ರತಿಪಾದಿಸುವ ಉದ್ದೇಶದಿಂದ ಪೌರತ್ವ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಆಪಾದಿಸಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರದ ದೀಪಾ ಆಸ್ಪತ್ರೆ ಬಳಿಯ ಮೈದಾನದಲ್ಲಿ ಬೆಂಗಳೂರು ಪೂರ್ವ ತಾಲೂಕು​​ ಪ್ರಗತಿಪರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಜನ ವಿರೋಧಿ ಪೌರತ್ವ ಕಾಯ್ದೆ ಸಿಎಎ, ಎನ್ಆರ್ ಸಿ ಹಾಗೂ ಎನ್ ಪಿ ಆರ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹೆಚ್.ಎಸ್.ದೊರೆಸ್ವಾಮಿ

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ದೇಶದ ಸಂವಿಧಾನದ ರಚನೆಗೊಂಡಾಗ ಹದಿನಾಲ್ಕು ಶೇಕಡಾದಷ್ಟು ಮುಸ್ಲಿಮರು ಈ ದೇಶದಲ್ಲಿದ್ದರು. ಪ್ರಸ್ತುತ ಹದಿನೇಳರಷ್ಟು ಮುಸ್ಲಿಂ ಸಮುದಾಯದವರು ನಮ್ಮ ದೇಶದಲ್ಲಿದ್ದಾರೆ. ಅಂದು ಗಾಂಧಿಯವರ ತತ್ತ್ವದಂತೆ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ 3 ಸಮುದಾಯಗಳು ಹಿಂದೂ, ಮುಸ್ಲಿಂ ಸಂಧಾನದಂತೆ ಈ ದೇಶದ ಅಸ್ತಿತ್ವ ಪಡೆದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಚಿಂತಕಿ ಭವ್ಯ ನರಸಿಂಹ ಮೂರ್ತಿ, ಜಮಿಯತುಲ್‌ ಉಲಮ ಎ ಕರ್ನಾಟಕ ರಾಜ್ಯ ಅಧ್ಯಕ್ಷ ಮುಫ್ತಿ ಇಫ್ತೆಕಾರ್ ಅಹಮದ್ ಸಾಬ್ ಸೇರಿದಂತೆ ಎಲ್ಲ ಭಾಷಣಕಾರರು ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದು, ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details