ಬೆಂಗಳೂರು:ಅನೈತಿಕ ಸಂಬಂಧದಿಂದಾಗಿ ಮಹಿಳೆಯೊರ್ವಳನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.
35 ವರ್ಷದ ಗೀತಾ ಮೃತಪಟ್ಟ ಮಹಿಳೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ಗೀತಾ ಎಂಬಾಕೆ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದಳು. ಪಕ್ಕದಲ್ಲೇ ವಾಸ ಮಾಡಿದ್ದ ಆಟೋ ಚಾಲಕ ಶೇಖರ್ ಜತೆ ಆಕೆ ಸಲುಗೆ ಬೆಳೆಸಿದ್ದಳು. ಆದರೆ, ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು ಪದೇ ಪದೇ ಜಗಳವಾಗುತ್ತಿತ್ತು.