ಕರ್ನಾಟಕ

karnataka

ETV Bharat / state

ನಾನು ಕನ್ನಡಕ ಹಾಕ್ಕೊಂಡು ಕತ್ತಲಲ್ಲಿದ್ದೇನೆ, ಯಾವ ವಿಚಾರವೂ ನನಗೆ ಗೊತ್ತಿಲ್ಲ: ಟಿ.ಬಿ.ಜಯಚಂದ್ರ - ಜಾತಿ ಗಣತಿ

ಐದು ವರ್ಷಗಳ ಕಾಲವೂ ನಾನೇ ಸಿಎಂ ಎಂಬ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರತಿಕ್ರಿಯಿಸಿದ್ದಾರೆ.

TB Jayachandra
ನಾನು ಕನ್ನಡಕ ಹಾಕೊಂಡು ಕತ್ತಲಲ್ಲಿದ್ದೇನೆ, ಯಾವ ವಿಚಾರವೂ ನನಗೆ ಗೊತ್ತಿಲ್ಲ: ಟಿ.ಬಿ.ಜಯಚಂದ್ರ

By ETV Bharat Karnataka Team

Published : Nov 3, 2023, 2:02 PM IST

ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರತಿಕ್ರಿಯೆ

ಬೆಂಗಳೂರು:''ನಾನು ಕನ್ನಡಕ ಹಾಕ್ಕೊಂಡು ಕತ್ತಲಲ್ಲಿದ್ದೀನಿ, ಯಾವ ವಿಚಾರವೂ ನನಗೆ ಗೊತ್ತಿಲ್ಲ'' ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಮುಂದೆಯೂ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಬೆಂಗಳೂರಲ್ಲಿ ಇಂದು (ಶುಕ್ರವಾರ) ಮಾತನಾಡಿದ ಅವರು, ''ನಾನು ಕಣ್ಣು ಆಪರೇಷನ್ ಮಾಡಿಸಿಕೊಂಡು ನಾಲ್ಕು ದಿನ ಆಗಿದೆ. ನನಗೆ ಟಿವಿ ನೋಡೋಕು ಬಿಡ್ತಿಲ್ಲ. ಏನು ಚರ್ಚೆ ಆಗಿದ್ಯೋ, ಆ ಗೋಜಿಗೆ ನಾನು ಹೋಗಿಲ್ಲ. ಈಗಾಗಲೇ ವರಿಷ್ಠರು ಬಂದು ಸೂಚನೆ ನೀಡಿ ಹೋಗಿದ್ದಾರೆ. ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ, ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ಕೊಡಲ್ಲ'' ಎಂದರು.‌

ಸದುದ್ದೇಶದಿಂದ ಜಾತಿ ಗಣತಿ:''ನಮ್ಮ‌ಕಾಲದಲ್ಲೇ ಮಾನದಂಡ ಇಟ್ಟುಕೊಂಡು ಜಾತಿ ಗಣತಿ ವರದಿ ಕೇಳಿದ್ದೆವು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಕೇಳಿದ್ವಿ. ನಮ್ಮ ಅವಧಿಯಲ್ಲಿ ಪರಿಪೂರ್ಣ ಏನಿದೆ ಅಂತ ಗೊತ್ತಿಲ್ಲ. ಜಯಪ್ರಕಾಶ್ ಹೆಗ್ಡೆ ವರದಿ ಕೊಡ್ತೀವಿ ಅನ್ನೋದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ವರದಿ ಕೊಟ್ಟಾಗ ಸರ್ಕಾರ ಸ್ವೀಕಾರ ಮಾಡಬೇಕು. ವರದಿ ಸ್ವೀಕಾರದ ಬಳಿಕ ಜಾರಿ ಮಾಡೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ'' ಎಂದು ಹೇಳಿದರು.

''ಅಧಿಕೃತವಾಗಿ ಸರ್ಕಾರಕ್ಕೆ ವರದಿ ಒಪ್ಪಿಸುವ ಕೆಲಸ ಮಾಡಬೇಕಿದೆ. ಸದುದ್ದೇಶದ ಹಿನ್ನೆಲೆಯಲ್ಲಿ ಐವತ್ತೈದು ಮಾನದಂಡ ಇಟ್ಟುಕೊಂಡು ಜಾತಿಗಣತಿ ಮಾಡಿಸಿದ್ದೇವೆ ಎಂದು ತಿಳಿಸಿದರು. ಪರಿಪೂರ್ಣವಾಗಿ ವರದಿ ಬಂದಿಲ್ಲ. ವರದಿಯಲ್ಲಿ ಏನಿದೆ ಎಂದೂ ಕೂಡ ಗೊತ್ತಿಲ್ಲ. ಜಯಪ್ರಕಾಶ್ ಹೆಗ್ಡೆ ಅವರು ವರದಿಯನ್ನು ರಕ್ಷಣೆ ಮಾಡ್ತಿದ್ದಾರೆ. ಅವರು ಸಮಿತಿ ವರದಿಯನ್ನು ಪರಿಶೀಲನೆ ಮಾಡ್ತೀವಿ ಅಂತಾ ಹೇಳ್ತಿದ್ದಾರೆ. ವರದಿಯನ್ನು ಕೊಟ್ಟಾಗ ಸರ್ಕಾರ ಸ್ವೀಕಾರ ಮಾಡುತ್ತದೆ. ಅದು ಬಂದ ಮೇಲೆ ಚರ್ಚೆ ಆಗುತ್ತದೆ'' ಎಂದರು.

''ಆ ವರದಿಯನ್ನೂ ಸ್ವೀಕಾರ‌ ಮಾಡಬೇಕಾ ಬೇಡವಾ ಸರ್ಕಾರ ನಿರ್ಧಾರ‌ ಮಾಡುತ್ತದೆ. ಈಗ ವರದಿಯಲ್ಲಿ ಏನಿದೆ ಗೊತ್ತಿಲ್ಲ. ಜಯಪ್ರಕಾಶ್ ವರದಿ ಸಲ್ಲಿಸಿದ ಮೇಲೆ‌ ಎಲ್ಲ ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ಹೀಗಾಗಿ ಅದಕ್ಕೂ ಮುನ್ನವೇ ಪ್ರತಿಕ್ರಿಯೆ ಕೊಡೋಕೆ ಆಗಲ್ಲ. ವರದಿ ಸ್ವೀಕಾರ ಮಾಡೋದು ಬಿಡೋದು ಬೇರೆ ವಿಚಾರ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ:ಸಿಎಂ ಹೇಳಿದ್ದಾರೆ ಅಂದ್ರೆ ಅದರಲ್ಲಿ ಏನೋ ಅರ್ಥ ಇರಬೇಕು: ಗೃಹ ಸಚಿವ ಡಾ.ಜಿ.ಪರಮೇಶ್ವರ್

ABOUT THE AUTHOR

...view details