ಕರ್ನಾಟಕ

karnataka

By

Published : Nov 24, 2020, 1:57 PM IST

ETV Bharat / state

ಅಕ್ರಮ ಚಿನ್ನಾಭರಣ ಸಾಗಣೆ: ಪ್ರಕರಣ ಗಂಭೀರವಾಗಿ ಪರಿಗಣಿಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು

ಅಕ್ರಮ ಚಿನ್ನಾಭರಣ ಸಾಗಣೆ ತನಿಖೆಯನ್ನ ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿದ್ದು, ಚಿನ್ನ ಹಾಗೂ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ‌.

Illegal Gold shipping case Commerce Tax Officers leading the investigation
ಅಕ್ರಮ ಚಿನ್ನಾಭರಣ ಸಾಗಾಟ ಪ್ರಕರಣ

ಬೆಂಗಳೂರು: ಸಿಲಿಕಾನ್ ಸಿಟಿಯ ಸಿಟಿ ಮಾರ್ಕೇಟ್ ಚೆಕ್ ಪೋಸ್ಟ್ ಬಳಿಯ ಸ್ಕೂಟರ್​​​​​​​ನಲ್ಲಿ 3 ಕೋಟಿ ಮೌಲ್ಯದ 6.55 ಕೆ.ಜಿ ಚಿನ್ನಾಭರಣ ಸಾಗಣೆ ತನಿಖೆಯನ್ನ ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿದ್ದು, ಚಿನ್ನ ಹಾಗೂ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ‌.

ಓದಿ: ಪ್ರಿಯಕರನೊಂದಿಗಿದ್ದ ವೇಳೆ ಸಿಕ್ಕಿಬಿದ್ದ ಪತ್ನಿ: ಇನಿಯನೊಂದಿಗೆ ಸೇರಿ ಗಂಡನ ಕೊಂದ ರಾಗಿಣಿ!

ರಾಜಸ್ಥಾನ ಮೂಲದ ದಲ್ವತ್ ಸಿಂಗ್ ಹಾಗೂ ವಿಕಾಸ್ ದಾಖಲೆ ರಹಿತ ಚಿನ್ನಾಭರಣ ಸಾಗಣೆ ಮಾಡುತ್ತಿದ್ದರು. ಹೀಗಾಗಿ ಪಶ್ಚಿಮ ವಿಭಾಗ ಡಿಸಿಪಿ ಡಾ.ಸಂಜೀವ್ ಎಂ.ಪಾಟೀಲ್ ಅವರು ಖುದ್ದಾಗಿ ಆರೋಪಿಗಳ ವಿಚಾರಣೆ ಮಾಡಿ ಆದಾಯ ತೆರಿಗೆ ಇಲಾಖೆಗೆ ಕೋಟ್ಯಂತರ ಮೌಲ್ಯದ ಅಕ್ರಮ ಚಿನ್ನ ಸಾಗಣೆ ಮಾಹಿತಿ ನೀಡುವಂತೆ ತಿಳಿಸಿದ್ದರು.

ಸದ್ಯ ಆದಾಯ ತೆರಿಗೆ ಇಲಾಖೆ ತನಿಖೆಗೆ ಇಳಿದಿದ್ದು, ಅಕ್ರಮ ಚಿನ್ನಾಭರಣ ಸಾಗಣೆ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

For All Latest Updates

ABOUT THE AUTHOR

...view details