ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಕೇಸ್​​: ಎಸ್​ಐಟಿಯಿಂದ ಅಪಾರ​ ಪ್ರಮಾಣದ ಚಿನ್ನಾಭರಣ ಜಪ್ತಿ

ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇಂದು ತಿಲಕ್​ ನಗರ ಮತ್ತು ಯಶವಂತಪುರ ಐಎಂಎ ಗೋಲ್ಡ್ ಮಳಿಗೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದೆ.

By

Published : Jun 25, 2019, 10:02 PM IST

ಮನ್ಸೂರ್​

ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇಂದು ತಿಲಕ್​ ನಗರ ಮತ್ತು ಯಶವಂತಪುರ ಐಎಂಎ ಗೋಲ್ಡ್ ಮಳಿಗೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದೆ.

ನಗರದ ತಿಲಕ್ ನಗರ ಮಳಿಗೆಯಲ್ಲಿ ಅಂದಾಜು 41,69 ಲಕ್ಷ ಬೆಲೆ ಬಾಳುವ 1 ಕೆಜಿ 300 ಗ್ರಾಂ ಚಿನ್ನ, ಹಾಗೆಯೇ 2.20 ಲಕ್ಷ ಮೌಲ್ಯದ 55 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಯಶವಂತಪುರ ಮಳಿಗೆಯಲ್ಲಿ ಅಂದಾಜು ಬೆಲೆ 31-04 ಲಕ್ಷ ಮೌಲ್ಯದ 970 ಗ್ರಾಂ ಚಿನ್ನದ ಆಭರಣ, 8.40 ಲಕ್ಷ ಬೆಲೆ ಬಾಳುವ 21 ಕೆಜಿ ಬೆಳ್ಳಿಯ ವಸ್ತುಗಳು ಮತ್ತು 2 ಸಾವಿರ ನಗದು ಸೇರಿ ಪ್ರಮುಖ ದಾಖಲೆಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಎಸ್​​ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details