ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬಿಹಾರ ಮೂಲದ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಬಿಹಾರ ಮೂಲದ ಕೂಲಿ ಕಾರ್ಮಿಕ 29 ಮಂದಿಗೆ ಸೋಂಕು ಹರಡಲು ಕಾರಣನಾಗಿದ್ದ. ಈತನ ಜಾಡು ಹಿಡಿದು ಮೂಲ ಪತ್ತೆ ಮಾಡಲು ತೆರಳಿದ ತಂಡಕ್ಕೆ ಸದ್ಯ ಸೋಂಕಿತ ರೈಲಿನಲ್ಲಿ ಬಿಹಾರದಿಂದ ಬಂದಿದ್ದ. ಬಿಹಾರಿ ಕೂಲಿ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದ್ದು, ಏಪ್ರಿಲ್ 22 ರಂದು. ರೈಲಿನಲ್ಲಿ ಪ್ರಯಾಣಿಸಿದಾಗಲೇ ಸೋಂಕು ಹರಡಿರುವ ಅನುಮಾನವನ್ನು ಬಿಬಿಎಂಪಿ ಕಣ್ಗಾವಲು ತಂಡ ವ್ಯಕ್ತಪಡಿಸಿದೆ. ಯಾಕಂದ್ರೆ ಆತ ಓಡಾಡಿರುವ ಯಾವ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಇಲ್ಲ. ಆತ ಕೆಲಸ ಮಾಡಿರುವ ಜಾಗಗಳೂ ಕೂಡ ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಇಲ್ಲ.