ಕರ್ನಾಟಕ

karnataka

By

Published : Feb 11, 2020, 3:51 PM IST

ETV Bharat / state

ಹೋಟೆಲ್‌ ಕ್ಲೋಸ್ ವಿಚಾರಕ್ಕೆ ಗಲಾಟೆ: ಪೊಲೀಸರಿಂದ ಕ್ಯಾಶಿಯರ್ ಮೇಲೆ ಹಲ್ಲೆಯ ಆರೋಪ!

ಕಾನೂನನ್ನ ನಾವು ಉಲ್ಲಂಘಿಸಿಲ್ಲ, ನಮಗೆ ನ್ಯಾಯ ಕೊಡಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ವಿಚಾರ ತಿಳಿದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಘಟನೆಯ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿಗೆ ಆದೇಶಿಸಿದ್ದಾರೆ.

Hotel Close matter
ಹೋಟೆಲ್ ಕ್ಲೋಸ್ ವಿಚಾರ ಗಲಾಟೆ

ಬೆಂಗಳೂರು: ಹೋಟೆಲ್​​ನ ಬಾಗಿಲು ಮುಚ್ಚುವ ವಿಚಾರವಾಗಿ ಇಬ್ಬರು ಪೊಲೀಸ್‌ ಪೇದೆಗಳು ಕ್ಯಾಶಿಯರ್​​​ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಪುಟ್ಟೇನಹಳ್ಳಿ ಮುಖ್ಯರಸ್ತೆಯ ಅಪರಂಜಿ ಬಿರಿಯಾನಿ ಮನೆ ಹೋಟೆಲ್ ಕ್ಯಾಶಿಯರ್​​​​ ಅಭಿ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ತಡರಾತ್ರಿ 11 ಗಂಟೆಗೆ ಹೋಟೆಲ್ ಕ್ಲೋಸ್ ಮಾಡದಿದ್ದಕ್ಕೆ ಪುಟ್ಟೇನಹಳ್ಳಿ ಠಾಣಾ ಪೊಲೀಸ್ ಕಾನ್ಸ್‌ಟೇಬಲ್​​​ಗಳಿಬ್ಬರು ಬಂದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆಂದು ಕ್ಯಾಶಿಯರ್ ಅಭಿ ಹಾಗೂ ಆತನ ಸಹೋದರ ಆರೋಪಿಸಿದ್ದಾರೆ.

ಹೋಟೆಲ್ ಕ್ಲೋಸ್ ವಿಚಾರಕ್ಕೆ ಗಲಾಟೆ..

ಹೋಟೆಲ್​​ನ ಸಿಸಿಟಿವಿಯಲ್ಲಿ‌ ಹಲ್ಲೆ ಮಾಡಿದ ದೃಶ್ಯ ಸೆರೆಯಾಗಿದೆ. ನಿತ್ಯ ಅಭಿ ಹಾಗೂ ಪ್ರಭಾಕರ್ ಸಹೋದರರಿಗೆ ಪೊಲೀಸರು ಮಾಮೂಲಿ ಕೇಳ್ತಿದ್ದರಂತೆ. ನಿನ್ನೆಯೂ ಸಹ ರಾತ್ರಿ 11 ಗಂಟೆಗೆ ಬಂದಿದ್ದ ಕಾನ್ಸ್‌ಟೇಬಲ್​​​ಗಳಿಬ್ಬರು ಹೋಟೆಲ್​​​ನಲ್ಲಿದ್ದ ಅಭಿ ಬಳಿ‌ ಹಣ ಕೇಳಿದ್ದಾರೆ.

ಯಾಕೆ ಏನು ಎಂದು ಅಭಿ ಪ್ರಶ್ನಿಸಿದ್ದಕ್ಕೆ ಹೋಟೆಲ್ ಕ್ಲೋಸ್ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಅಭಿ ಕಸ್ಟಮರ್​​ಗಳಿದ್ದಿದ್ದರಿಂದ ಕ್ಲೋಸ್ ಮಾಡೋಕೆ, ಸಮಯ‌ ಕೊಡಿ ಅಂದಿದ್ದಕ್ಕೆ ಸಾರ್ವಜನಿಕವಾಗಿ ಆತನಿಗೆ ಲಾಠಿಯಿಂದ ಥಳಿಸಿ, ಮತ್ತೋರ್ವ ಕೆಲಸಗಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ ಅಂತಾ ಸಹೋದರರಿಬ್ಬರು ಆರೋಪಿಸ್ತಿದ್ದಾರೆ. ಕಾನೂನನ್ನ ನಾವು ಉಲ್ಲಂಘಿಸಿಲ್ಲ, ನಮಗೆ ನ್ಯಾಯ ಕೊಡಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ವಿಚಾರ ತಿಳಿದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಘಟನೆಯ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿಗೆ ಆದೇಶಿಸಿದ್ದಾರೆ.

ABOUT THE AUTHOR

...view details