ಕರ್ನಾಟಕ

karnataka

ETV Bharat / state

ಮಹಾನಗರದ ವಿವಿಧೆಡೆ ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಕೆ - ಮಹಾಮಾರಿ ಕೊರೊನಾ ವಿರುದ್ಧ ಹೋರಾಟ

ಮಹಾಮಾರಿ ಕೊರೊನಾ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್​ಗೆ ಬೆಂಗಳೂರಿನಲ್ಲಿ ಸಾರ್ವಜನಿಕರೇ ಸೇರಿ ಗೌರವ ಸಮರ್ಪಣೆ ಮಾಡಿದರು.

Public honour 'corona warriors' in Bangaluru
ನಗರದ ವಿವಿಧೆಡೆ ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಕೆ

By

Published : May 4, 2020, 4:56 PM IST

ಬೆಂಗಳೂರು:ದೊಮ್ಮಲೂರು ವಾರ್ಡ್​ನಲ್ಲಿ ಇಂದು ಕೊರೊನಾ ವಾರಿಯರ್ಸ್​ಗೆ ಗೌರವ ಸಮರ್ಪಣೆ ಮಾಡಲಾಯಿತು‌. ದೊಮ್ಮಲೂರು ವಾರ್ಡ್ ಪಾಲಿಕೆ ಸದಸ್ಯ ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್, ಮೇಯರ್ ಗೌತಮ್ ಕುಮಾರ್ ಭಾಗಿಯಾಗಿದ್ದರು‌.

ನಗರದ ವಿವಿಧೆಡೆ ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಕೆ

ಕೊರೊನಾ ತಡೆಗಟ್ಟಲು ಶ್ರಮಿಸಿದ ಪೌರಕಾರ್ಮಿಕರು, ಪಾಲಿಕೆ ವೈದ್ಯರು, ಪೊಲೀಸರಿಗೆ ಹೂಮಳೆ ಸುರಿಸಿ, ಸನ್ಮಾನ ಮಾಡಲಾಯಿತು. ಅಲ್ಲದೇ ನಗರದ ವಿವಿಧೆಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುವರಿಗೂ ಧನ್ಯವಾದ ಸಮರ್ಪಣೆ ಮಾಡಲಾಯಿತು. ಎಸ್ ಆರ್ ನಗರದಲ್ಲಿಯೂ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಲಾಯಿತು. ಸಾರ್ವಜನಿಕರೇ ಸೇರಿ ಸನ್ಮಾನ ಮಾಡಿ ದಿನಸಿ ಕಿಟ್​ಗಳನ್ನು ನೀಡಿದರು.

ನಗರದ ವಿವಿಧೆಡೆ ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಕೆ
ನಗರದ ವಿವಿಧೆಡೆ ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಕೆ

ABOUT THE AUTHOR

...view details