ಬೆಂಗಳೂರು:ಇನ್ಮುಂದೆ ಕೊರೊನಾ ತಪಾಸಣೆ ಮಾಡಿಸಿಕೊಂಡವರು ವರದಿ ಬರುವ ಮುನ್ನವೇ ಮನೆಯಿಂದ ಹೊರಗೆ ಹೋಗುವಂತಿಲ್ಲ, ಹಾಗೊಂದು ವೇಳೆ ಹೋಗಬೇಕು ಅಂತಾ ಇದ್ರೆ ಮೊದಲು ಯೋಚಿಸಿ, ಯಾಕಂದ್ರೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಸಿದ್ದವಾಗಿ ಕುಳಿತಿದೆ.
ಹೌದು, ರಾಜ್ಯದಲ್ಲಿ ಎಷ್ಟೇ ಲ್ಯಾಬ್ಗಳನ್ನು ಹೊಸದಾಗಿ ಆರಂಭಿಸಿದರೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳದಿಂದ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿದೆ. ಕೊರೊನಾ ಶಂಕಿತ ವ್ಯಕ್ತಿ ಪರೀಕ್ಷೆಗೆ ಒಳಪಟ್ಟರೂ ವರದಿ ಬರಲು ನಾಲ್ಕೈದು ದಿನವಾಗಲಿದೆ. ಅಷ್ಟರಲ್ಲಿ ಆ ವ್ಯಕ್ತಿ ಹತ್ತಾರು ಕಡೆ ಓಡಾಟ ನಡೆಸಿ ಹಲವರ ಸಂಪರ್ಕ ಮಾಡಿರುತ್ತಾರೆ. ಇದರಿಂದ ಸೋಂಕು ಹೆಚ್ಚುತ್ತಲೇ ಹೋಗುತ್ತಿದೆ. ಏನೇ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ, ಈಗ ಇದಕ್ಕೆ ಬ್ರೇಕ್ ಹಾಕಲು ಕಠಿಣ ನಿಯಮ ಜಾರಿಗೆ ಸರ್ಕಾರ ಮುಂದಾಗಿದೆ.