ಕರ್ನಾಟಕ

karnataka

ETV Bharat / state

ವೀಕೆಂಡ್ ಕರ್ಫ್ಯೂ ಬೇರೆ ದಿನಗಳಿಗೂ ವಿಸ್ತರಣೆ ಪ್ರಸ್ತಾಪ ಇಲ್ಲ: ಗೃಹ ಸಚಿವ ಬೊಮ್ಮಾಯಿ ಸ್ಪಷ್ಟನೆ - Weekend Curfew

ಜನ ಸ್ವಯಂಪ್ರೇರಣೆಯಿಂದ ಓಡಾಟ ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಕೊರೊನಾ ನಿರ್ವಹಣೆಗೆ ಬಹಳಷ್ಟು ಅನುಕೂಲವಾಗಲಿದೆ. ಎಲ್ಲ ಜಿಲ್ಲಾಧಿಕಾರಿಗಳಿಂದ ಈಗಾಗಲೇ ಯಡಿಯೂರಪ್ಪ ಮಾಹಿತಿ ಪಡೆದಿದ್ದಾರೆ. ಎಲ್ಲಾ ಕಡೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಗೃಹ ಸಚಿವ ಬೊಮ್ಮಾಯಿ ಸ್ಪಷ್ಟನೆ
ಗೃಹ ಸಚಿವ ಬೊಮ್ಮಾಯಿ ಸ್ಪಷ್ಟನೆ

By

Published : Apr 25, 2021, 1:43 PM IST

Updated : Apr 25, 2021, 1:51 PM IST

ಬೆಂಗಳೂರು:ವೀಕೆಂಡ್ ಕರ್ಫ್ಯೂವನ್ನು ಬೇರೆ ದಿನಗಳಿಗೆ ವಿಸ್ತರಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಸದ್ಯ ಇರುವ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಬೊಮ್ಮಾಯಿ ಸ್ಪಷ್ಟನೆ

ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದನ್ನೇ ಮುಂದುವರೆಸಲಾಗುತ್ತದೆ ಎನ್ನುವುದು ನಿರಾಧಾರ. ಅಂತಹ ಯಾವುದೇ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲ. ಅಂತಹ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಸದ್ಯ ಈಗ ವಾರಾಂತ್ಯ ಎರಡು ದಿನ ಸಂಪೂರ್ಣ ಕರ್ಫ್ಯೂ, ಬಾಕಿ ಐದು ದಿನ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ ಎಂದು ತಿಳಿಸಿದರು.

ಇಂದು ಸಂಜೆ ವೇಳೆಗೆ ಕೇಂದ್ರ ಸರ್ಕಾರ ನಮಗೆ ಆಮ್ಲಜನಕ ಪೂರೈಕೆ ಪ್ರಮಾಣವನ್ನು 300 ಮೆಟ್ರಿಕ್ ಟನ್​​ನಿಂದ 800 ಮೆಟ್ರಿಕ್ ಟನ್​​ಗೆ ಹೆಚ್ಚಿಸಿ ಆದೇಶ ಹೊರಡಿಸಿರುವಂತೆ ಹೆಚ್ಚುವರಿ ಆಮ್ಲಜನಕ ಬರಲಿದೆ. ಹಾಗಾಗಿ ಬರುವ ದಿನಗಳಲ್ಲಿ ಆಮ್ಲಜನಕದ ಕೊರತೆ ನಮಗೆ ಕಡಿಮೆಯಾಗಲಿದೆ. ಯಾವುದೇ ರೀತಿಯ ಕೊರತೆಯಾಗದಂತೆ ನಿಭಾಯಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಲಿದ್ದಾರೆ. ಈಗ ರಾಜ್ಯದ ಕೋಟಾ ಹೆಚ್ಚಾಗಿದ್ದರಿಂದ ಇನ್ನಷ್ಟು ಅನುಕೂಲವಾಗಿದೆ. ಅದೇ ರೀತಿ ರೆಮ್ಡೆಸಿವಿರ್ ಕೂಡ 50,000 ಇತ್ತು. ಅದನ್ನು ಕೂಡ 1,22,000ಕ್ಕೆ ಹೆಚ್ಚಿಗೆ ಮಾಡಿದ್ದರಿಂದ ಔಷಧ ಕೊರತೆ ಆಗಲ್ಲ. ಎಲ್ಲ ಜಿಲ್ಲೆಗಳಿಗೂ ಅದನ್ನು ಕಳುಹಿಸಿಕೊಡಲಾಗುತ್ತದೆ‌. ಮೈಸೂರು, ಕಲಬುರಗಿ, ಮಂಗಳೂರು, ಬೆಳಗಾವಿ ಸೇರಿದಂತೆ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿರುವ ಕಡೆ ಮೊದಲು ಕಳಿಸಿಕೊಡುತ್ತೇವೆ ಎಂದರು.

ವ್ಯಾಕ್ಸಿನೇಷನ್‌ ಮೊದಲ ಡೋಜ್ ಪಡೆದವರಿಗೆ ಎರಡನೇ ಡೋಜ್ ಸಿಗುತ್ತಿಲ್ಲ ಎನ್ನುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಮೇ 1ರಿಂದ ರಾಜ್ಯಕ್ಕೆ ಹೆಚ್ಚಿನ ಡೋಜ್ ಬರಲಿದೆ. ಆಗ ಎರಡನೇ ಡೋಜ್ ಪಡೆಯುವವರಿಗೆ ಇದ್ದ ಲಸಿಕೆ ಕೊರತೆ ಸಮಸ್ಯೆ ಪರಿಹಾರವಾಗಲಿದೆ. ಮೇ 1 ರಿಂದ 40 ವರ್ಷ ದಾಟಿದವರಿಗೆ 2ನೇ ಡೋಜ್ ಕೊಡಲು ಶುರು ಮಾಡುತ್ತೇವೆ ಎಂದರು‌.

ಇದನ್ನೂ ಓದಿ : ಐಸಿಯು- ವೆಂಟಿಲೇಟರ್ ಬೆಡ್​​ ಕೊರತೆ ನೀಗಿಸಲು ಮೇಕ್ ಶಿಫ್ಟ್ ಆಸ್ಪತ್ರೆ: ಸಚಿವ ಸುಧಾಕರ್

ನಮಗೆ ಬಂದಿರುವ ರೆಮ್ಡೆಸಿವಿರ್ ದಾಸ್ತಾನನ್ನು ಸರಿಯಾಗಿ ವಿತರಣೆ ಮಾಡುವ ಕೆಲಸವನ್ನು ಮಾಡುತ್ತೇವೆ. ಕೃತಕ ಅಭಾವ ಸೃಷ್ಟಿಯಾಗಿಲ್ಲ. ಡಿಸಿಎಂ ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಪೂರೈಕೆ ಮತ್ತು ಹಂಚಿಕೆ ಎರಡನ್ನು ನೋಡಿಕೊಳ್ಳಬೇಕು. ಆ ಕೆಲಸವನ್ನು ನಿನ್ನೆ ಸಂಜೆ ಮುಖ್ಯ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಬಿಬಿಎಂಪಿ ಅಧಿಕಾರಿಗಳು ಸೇರಿ ಮಾಡುತ್ತಿದ್ದಾರೆ ಎಂದು ಔಷಧಿ ಕೃತಕ ಅಭಾವ ಸೃಷ್ಟಿ ಆರೋಪವನ್ನು ತಳ್ಳಿಹಾಕಿದರು.

Last Updated : Apr 25, 2021, 1:51 PM IST

ABOUT THE AUTHOR

...view details