ಕರ್ನಾಟಕ

karnataka

ETV Bharat / state

ಬಿ ವೈ ವಿಜಯೇಂದ್ರ ಪದಗ್ರಹಣ: ಬಿಜೆಪಿ ಕಚೇರಿಯಲ್ಲಿ ಹೋಮ, ಹವನ, ಪೂರ್ಣಾಹುತಿ - Poornahuti at BJP office

ಬಿ ವೈ ವಿಜಯೇಂದ್ರ ಪದಗ್ರಹಣ ನಿಮಿತ್ತ ಬಿಜೆಪಿ ಕಚೇರಿಯಲ್ಲಿ ಹೋಮ, ಹವನ, ಪೂರ್ಣಾಹುತಿ ನಡೆಯಲಿದೆ ಎಂದು ಪಕ್ಷ ತಿಳಿಸಿದೆ.

vijayendra take charge as bjp state president
vijayendra take charge as bjp state president

By ETV Bharat Karnataka Team

Published : Nov 14, 2023, 8:11 PM IST

ಬೆಂಗಳೂರು:ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬುಧವಾರ ಬೆಳಗ್ಗೆ ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಲಿದ್ದು, ಹೋಮ, ಹವನ, ಪೂರ್ಣಾಹುತಿ, ಗೋಪೂಜೆ ಮೂಲಕ ಪದಗ್ರಹಣ ಮಾಡಲಿದ್ದಾರೆ. ಇದಕ್ಕಾಗಿ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸಕಲ ಸಿದ್ದತೆ ಮಾಡಕೊಳ್ಳಲಾಗಿದೆ. ಬೆಳಗ್ಗೆ 9.45ಕ್ಕೆ ನಿಯೋಜಿತ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುತ್ತದೆ.

ಬಿವೈ ವಿಜಯೇಂದ್ರ ಪದಗ್ರಹಣಕ್ಕೆ ಸಿದ್ಧತೆ

ನಂತರ ಪಕ್ಷದ ಮುಂಭಾಗ ಗೋಪೂಜೆ ಇರಲಿದೆ. ಬಳಿಕ ಗಣಹೋಮದ ಪೂರ್ಣಾಹುತಿ ಇರಲಿದೆ. ಹಾಲಿ ಅಧ್ಯಕ್ಷರು, ನಿಯೋಜಿತ ಅಧ್ಯಕ್ಷರು ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಳಿಕ ಕಟೀಲ್ ಅವರಿಂದ ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರ ಇರಲಿದೆ. ಆ ಬಳಿಕ ನೂತನ ಅಧ್ಯಕ್ಷರಾದ ವಿಜಯೇಂದ್ರ ಮತ್ತು ನಳಿನ್ ಕುಮಾರ್ ಕಟೀಲ್ ಅಪರಾಹ್ನ 12 ಗಂಟೆಗೆ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಜೆಪಿ ಮುಖ್ಯ ವಕ್ತಾರ ಎಂಜಿ ಮಹೇಶ್ ಮಾಹಿತಿ ನೀಡಿದ್ದಾರೆ.

ಬಿವೈ ವಿಜಯೇಂದ್ರ ಪದಗ್ರಹಣಕ್ಕೆ ಸಿದ್ಧತೆ

ಅಣ್ಣಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ: ಇಂದು ಅಣ್ಣಮ್ಮದೇವಿ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಮ್ಮದೇವಿ ಬೆಂಗಳೂರಿನ ತಾಯಿ ಹಾಗೂ ಗ್ರಾಮ ದೇವತೆ. ಹಾಗಾಗಿ, ಮೊದಲ ಬಾರಿಗೆ ಭೇಟಿ ಕೊಡ್ತಿದ್ದೇನೆ. ದೊಡ್ಡ ಸವಾಲು ನಮ್ಮ ಮುಂದಿದೆ. ಲೋಕಸಭಾ ಚುನಾವಣೆಗೆ ತಯಾರಾಗಬೇಕಿದೆ. ಭೀಕರ‌ ಬರಗಾಲ ಇದೆ. ರಾಜ್ಯ, ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಹಾರ ಕೊಡಬೇಕಿದೆ. ಎಲ್ಲರ ವಿಶ್ವಾಸ ಗಳಿಸಬೇಕಿದೆ. ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೋದಿ ಅವರ ವಿಶ್ವಾಸ ಉಳಿಸಿಕ್ಕೊಳ್ಳುವೆ ಎಂದರು.

ಬಿವೈ ವಿಜಯೇಂದ್ರ ಪದಗ್ರಹಣಕ್ಕೆ ಸಿದ್ಧತೆ

ನನಗೆ ಅಧಿಕಾರ ನೀಡಿರುವ ಬಗ್ಗೆ ಜೆಪಿ ನಡ್ಡಾ ಹಾಡಿ ಹೊಗಳಿರೋ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಪಕ್ಷ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ. ಎಲ್ಲವನ್ನೂ ನೋಡಿಯೇ ಜವಾಬ್ದಾರಿ ಕೊಡ್ತಾರೆ. ಯಡಿಯೂರಪ್ಪ ಅವರ ಮಗ ಅನ್ನೋದು ನನಗೆ ಹೆಮ್ಮೆ ಇದೆ. ಒಂದಂತೂ ಸತ್ಯ. ಇಷ್ಟು ದೊಡ್ಡ ಹೊಣೆಗಾರಿಕೆ, ವಿಶ್ವಾಸಕ್ಕೆ ಧಕ್ಕೆ ತರಲ್ಲ. ದೊಡ್ಡ ಜವಾಬ್ದಾರಿ ಇದೆ. ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಬಿವೈ ವಿಜಯೇಂದ್ರ ಪದಗ್ರಹಣಕ್ಕೆ ಸಿದ್ಧತೆ

ನಾಳೆ ಬಿಜೆಪಿ ಕಚೇರಿಯಲ್ಲಿ ಹೋಮ, ಪೂಜೆ ನಡೆಸಲಿದ್ದಾರೆ. ನಳಿನ್ ಕುಮಾರ್​ ಕಟೀಲ್ ಅವರಿಂದ ಅಧಿಕಾರ ಸ್ವೀಕಾರ ಮಾಡಲಿದ್ದೇನೆ ಎಂದು ವಿಜಯೇಂದ್ರ, ಯಾರ್ಯಾರು ಬರ್ತಾರೆ ಅನ್ನೋ ಪ್ರಶ್ನೆಗೆ ಎಲ್ಲರೂ ಬರ್ತಾರಣ್ಣ ಅಂತ ಯಡಿಯೂರಪ್ಪ ಶೈಲಿಯಲ್ಲಿ ಹೇಳಿದರು.

ಬಿವೈ ವಿಜಯೇಂದ್ರ ಪದಗ್ರಹಣಕ್ಕೆ ಸಿದ್ಧತೆ

ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ ನಾಳೆ: ಸಂಘಟಕರಿಗೆ ಪತ್ರದ ಮೂಲಕ ಬಹಿರಂಗ ಆಹ್ವಾನ

ABOUT THE AUTHOR

...view details