ಕರ್ನಾಟಕ

karnataka

ETV Bharat / state

ಅನ್ನಭಾಗ್ಯ ಅಕ್ಕಿ ರೀತಿ ನೀರನ್ನೂ ಕಡಿಮೆ ದರದಲ್ಲಿ ಕೊಡಿ.. ಸರ್ಕಾರಕ್ಕೆ ಹೆಚ್ ಕೆ ಪಾಟೀಲ್‌ ಪತ್ರದ ಮೂಲಕ ಆಗ್ರಹ - undefined

ಸರ್ಕಾರಕ್ಕೆ ಪತ್ರ ಬರೆದ ಮಾಜಿ ಸಚಿವ ಹೆಚ್ ಕೆ ಪಾಟೀಲ್. ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ಸರ್ಕಾರಕ್ಕೆ ಮಾಜಿ ಸಚಿವರ ಆಗ್ರಹ.

ಸರ್ಕಾರಕ್ಕೆ ಹೆಚ್ ಕೆ ಪಾಟೀಲ್‌ ಪತ್ರದ ಮೂಲಕ ಆಗ್ರಹ

By

Published : Jun 8, 2019, 12:17 PM IST

Updated : Jun 8, 2019, 1:39 PM IST

ಬೆಂಗಳೂರು: ಮಾಜಿ ಸಚಿವ ಹೆಚ್ ಕೆ ಪಾಟೀಲ್ ಮೊನ್ನೆ ಜಿಂದಾಲ್ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಸಾರಿ ಕುಡಿಯೋ ನೀರಿನ ವಿಚಾರವಾಗಿ ಪತ್ರ ಬರೆದಿದ್ದು, ಕುಡಿಯೋ ನೀರಿನ ಪೂರೈಕೆಯನ್ನ ಸರ್ಕಾರ ಹೇಗೆ ಮಾಡಿದ್ರೇ ಸೂಕ್ತ ಅನ್ನೋದರ ಕುರಿತಂತೆ ಸಲಹೆ ನೀಡಿದ್ದಾರೆ.

ಸಚಿವ ಕೃಷ್ಣಬೈರೇಗೌಡ ಜತೆಗೆ ಸಿಎಂ ಕುಮಾರಸ್ವಾಮಿಯವರಿಗೂ ಪತ್ರದ ಪ್ರತಿ ರವಾನಿಸಿರುವ ಅವರು, "ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಜವಾಬ್ದಾರಿ". ಅನ್ನ ಭಾಗ್ಯದ ಅಕ್ಕಿ ರೀತಿ ನೀರನ್ನೂ ಕಡಿಮೆ ದರದಲ್ಲಿ ಸರ್ಕಾರವೇ ಪೂರೈಸಬೇಕು ಅಂತಾ ಆಗ್ರಹಿಸಿದ್ದಾರೆ.

ಅದಕ್ಕಾಗಿಯೇ ಸರ್ಕಾರ ಪ್ರತೀ ಲೀಟರ್ ನೀರಿಗೆ 10 ಪೈಸೆಯಂತೆ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಆದರೆ, ಈ ನೀರಿನ ದರವನ್ನು ಪ್ರತಿ ಲೀಟರ್​ಗೆ 25 ಪೈಸೆ ಹೆಚ್ಚಿಸಲು ಮುಂದಾಗಿರುವುದು ಸಮಂಜಸವಲ್ಲ, ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಸಿಎಂ ಕುಮಾರಸ್ವಾಮಿ ಮತ್ತು ಕೃಷ್ಣಬೈರೇಗೌಡರಿಗೆ ಪತ್ರ ಬರೆದಿರುವ ಹೆಚ್‌ ಕೆ ಪಾಟೀಲರು, ಇದನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Last Updated : Jun 8, 2019, 1:39 PM IST

For All Latest Updates

TAGGED:

ABOUT THE AUTHOR

...view details