ಕರ್ನಾಟಕ

karnataka

ETV Bharat / state

ಹಿಂದೂ ವಿರೋಧಿಗಳೇ ಈತನ ಟಾರ್ಗೆಟ್: ಎಸ್ಐಟಿ ಮುಂದೆ ಸತ್ಯ ಬಾಯಿಬಿಟ್ಟ ಗೌರಿ ಹಂತಕ - ಆರೋಪಿ ರಿಷಿಕೇಶ್ ದೇವಾಡಿರ್​

ಎಸ್​ಐಟಿ ಅಧಿಕಾರಿಗಳು ಗೌರಿ ಲಂಕೇಶ್​ ಹತ್ಯೆ ಪ್ರಕರಣದ ಆರೋಪಿ ರಿಷಿಕೇಶ್ ದೇವಾಡಿಕರ್​ನನ್ನ ಹೆಚ್ವಿನ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ಟಾರ್ಗೇಟ್ ಮಾಡಿ ಹೊಸ ಹೊಸ ತಂಡ ರಚನೆ ಮಾಡಿ ಹಲವಾರು ಮಂದಿಯನ್ನ ಹತ್ಯೆ ಮಾಡಿರುವ ಫ್ಲಾನ್ ಮಾಡಿರುವ ವಿಚಾರವನ್ನ ಬಾಯಿ ಬಿಟ್ಟಿದ್ದಾನೆ.

His target is the anti-Hindu
ಹಿಂದೂ ವಿರೋಧಿಗಳೆ ಈತನ ಟಾರ್ಗೆಟ್

By

Published : Jan 15, 2020, 11:07 AM IST

ಬೆಂಗಳೂರು:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ 18ನೇ ಆರೋ‌ಪಿ ದೇವಾಡಿಕರ್ ಅಲಿಯಾಸ್ ಮುರಳಿ ಶಿವನ ವಿಚಾರಣೆಯನ್ನ ಎಸ್​​ಐಟಿ ತಂಡ ಚುರುಕುಗೊಳಿಸಿದೆ.

ಎಸ್​ಐಟಿಯ ಹಿರಿಯ ಅಧಿಕಾರಿಗಳು ಸಿಐಡಿ ಕಚೇರಿಯ‌ ಆವರಣದಲ್ಲಿರುವ ಕಚೇರಿಯಲ್ಲಿ ಆರೋಪಿ ರಿಷಿಕೇಶ್ ದೇವಾಡಿರ್​ನನ್ನ ಹೆಚ್ವಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಹಿಂದೂ ವಿರೋಧಿಗಳೆ ಈತನ ಟಾರ್ಗೆಟ್

ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹಿಂದೂ ಧರ್ಮದ ಕುರಿತು ಅವಹೇಳಕಾರಿ ಭಾಷಣ, ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ಟಾರ್ಗೆಟ್​ ಮಾಡಿ ಹೊಸ ಹೊಸ ತಂಡ ರಚನೆ ಮಾಡಿ ಹಲವಾರು ಮಂದಿಯನ್ನ ಹತ್ಯೆ ಮಾಡಲು ಫ್ಲಾನ್ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ಸದ್ಯ ಈತನ ಬಂಧನದಿಂದ ಮಹಾರಾಷ್ಟ್ರ ಹಾಗೂ ಕೆಲವೆಡೆ ಸಕ್ರಿಯ ಗ್ಯಾಂಗ್ ಕುರಿತು ಎಸ್ಐಟಿ ಮಾಹಿತಿ ಕಲೆಹಾಕಿದ್ದು, ಈತನ ಜೊತೆ ಮತ್ತೋರ್ವ ಸಹಚರ ಇರುವುದಾಗಿ ಗೊತ್ತಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ಹಿನ್ನೆಲೆ:ಜಾರ್ಖಂಡ್ ರಾಜ್ಯದ ಧನ್​ಬಾದ್​​ ಜಿಲ್ಲೆಯ ಕತ್ರಾಸ್​​ನಲ್ಲಿ ಈತ ಅಡಗಿದ್ದ. ಕಳೆದ ವಾರ ಈತ‌ನನ್ನ ಬಂಧಿಸಿ‌ ಎಸ್​ಐಟಿ ಹೆಚ್ಚಿನ ವಿಚಾರಣೆಗೆ ಎಂದು ವಶಕ್ಕೆ ಪಡೆದಿತ್ತು. ಈತ ಗೌರಿ ಪ್ರಕರಣದಲ್ಲಿ 18ನೇ ಆರೋಪಿಯಾಗಿದ್ದು, ಗೌರಿ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.

ABOUT THE AUTHOR

...view details