ಕರ್ನಾಟಕ

karnataka

ETV Bharat / state

ಮರಗಳ ಗಣತಿ ತಿಂಗಳೊಳಗೆ ಪ್ರಾರಂಭಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ - ಬೆಂಗಳೂರಿನಲ್ಲಿ ಮರಗಳ ಗಣತಿ

ಬೆಂಗಳೂರು: ಮರಗಳ ರಕ್ಷಣೆಗೆ ಸಂಬಂಧಿಸಿದಂತೆ ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

By

Published : Oct 11, 2019, 5:14 AM IST

Updated : Oct 11, 2019, 6:11 AM IST

ಬೆಂಗಳೂರು :ನಗರದಲ್ಲಿನ ಮರಗಳ ಗಣತಿಯನ್ನು ಒಂದು ತಿಂಗಳ ಒಳಗಾಗಿ ಪ್ರಾರಂಭಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮರಗಳ ಗಣತಿ ಕುರಿತು 2019ರ ಆಗಸ್ಟ್ ‌20ರಂದು ನಿರ್ದೇಶನ ನೀಡಲಾಗಿತ್ತು. ಇಲ್ಲಿಯವರೆಗೆ ಮರಗಳ ಗಣತಿಯನ್ನು ಪ್ರಾರಂಭಿಸಲಿಲ್ಲ ಏಕೆ ಎಂದು ಬಿಬಿಎಂಪಿ ವಿರುದ್ಧ ನ್ಯಾಯಾಲಯ ಕಿಡಿಕಾರಿತು. ಈ ಸಂಧರ್ಭದಲ್ಲಿ ಬಿಬಿಎಂಪಿ ಪರ ವಕೀಲರು ನಗರದಲ್ಲಿರುವ ಮರಗಳ ಗಣತಿಯನ್ನು ಆದಷ್ಟು ಬೇಗ ಪ್ರಾರಂಭಿಸಲಿದ್ದೇವೆ ಎಂದು ತಿಳಿಸಿದರು.

ಹೀಗಾಗಿ ನ್ಯಾಯಾಲಯ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

Last Updated : Oct 11, 2019, 6:11 AM IST

ABOUT THE AUTHOR

...view details