ಕರ್ನಾಟಕ

karnataka

ETV Bharat / state

ಬೆಂಗಳೂರು ಮೂಲಕ ತಮಿಳುನಾಡಿಗೆ ನುಗ್ಗಿದ್ರಾ ಲಂಕಾ ಉಗ್ರರು? ನಗರದಲ್ಲಿ ಹೈ ಅಲರ್ಟ್ - Intelligence Report about Terrorist

ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ತಮಿಳುನಾಡಿನ ಕೊಯಂಬತ್ತೂರು ನಗರಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ತಮಿಳುನಾಡು ಹಾಗೂ ಸುತ್ತಮುತ್ತಲಿನ ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಹೈ ಅಲರ್ಟ್

By

Published : Aug 23, 2019, 6:28 PM IST

ಬೆಂಗಳೂರು: ಶ್ರೀಲಂಕಾ‌ ಮೂಲದ ಉಗ್ರರು ತಮಿಳುನಾಡಿಗೆ ಬಂದಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ.

ತಮಿಳುನಾಡಿನ ಕೊಯಂಬತ್ತೂರು ನಗರಕ್ಕೆ ಹೈ ಅಲರ್ಟ್ ಘೋಷಿಸಿರುವ ಕೇಂದ್ರ ಗುಪ್ತಚರ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಸಂಪೂರ್ಣ ಬಂದೋಬಸ್ತ್ ಏರ್ಪಡಿಸಿದ್ದಾರೆ. ತಮಿಳುನಾಡಿಗೆ ನಗರದ ಮೂಲಕ ಉಗ್ರರು ಪ್ರವೇಶದ ಶಂಕೆ ಹಿನ್ನೆಲೆಯಲ್ಲಿ‌ ರಾಜ್ಯ ಗುಪ್ತಚರ ಇಲಾಖೆ ಹಾಗೂ ನಗರ ಆಂತರಿಕ ಭದ್ರತಾ ದಳ ಅಲರ್ಟ್ ಆಗಿದೆ.

ಎಂದಿನಂತೆ ಬೆಂಗಳೂರು ಹೊರವಲಯ ಪ್ರದೇಶಗಳಲ್ಲಿ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ABOUT THE AUTHOR

...view details